ಅಣ್ಣಾವ್ರಿಗೊಂದು ಪತ್ರ…

ಕನ್ನಡ ಚಿತ್ರಜಗತ್ತಿನ ಧ್ರುವ ತಾರೆ

ಕನ್ನಡ ಚಿತ್ರಜಗತ್ತಿನ ಧ್ರುವ ತಾರೆ

ಚಿತ್ರಜಗತ್ತಿನ ನಿರ್ಮಲ ಚಿತ್ತವೇ,

ಬದುಕು ಕಟ್ಟಿಕೊಡುವ ಸುಂದರ ಕನಸುಗಳನ್ನು, ಅದು ತಂದೊಡ್ಡುವ ಅನೇಕ ಕ್ಲಿಷ್ಟ್ಕಕರ ಸಂದರ್ಭಗಳನ್ನು, ಬದುಕಿನ ಸೌಂದರ್ಯವನ್ನು ಹೇಗೆ ಅನುಭವಿಸಬೇಕೆಂದೆಲ್ಲ ನಿನ್ನಿಂದ ನಾನು ಕಲಿತುಕೊಂಡೆ. ನಾನು ನಿನ್ನನ್ನು ಬರೀ ಒಬ್ಬ ಕಲಾವಿದನಾಗಿ ನೋಡಲಿಲ್ಲ. ಕಲಾವಿದನಾಗಿ ನಿನ್ನ ಬದುಕು ಇಷ್ಟು ಔನತ್ಯಕ್ಕೇರಲು ನಿನ್ನ ಆ ಹಲವಾರು ವರ್ಷಗಳ ಕಠಿಣ ಪರಿಶ್ರಮವಲ್ಲದೇ ಮತ್ತೇನಿರಲು ಸಾಧ್ಯ..? ೧೯೫೪ರ ಸಂದರ್ಭ, ನೀನು ಚಿತ್ರಜಗತ್ತಿಗೆ ಪ್ರವೇಶಿಸಿದಾಗ ನಿನಗೆ ಗೊತ್ತಿರುವ ಹಾಗೆ ಕಲಾವಿದರ ಅಳಿವು ಉಳಿವು ಅವರುಗಳು ನಟನೆಯ ಮೇಲೆ ಹೆಚ್ಚು ನಿರ್ಭರವಾಗಿರುತ್ತಿತ್ತು. ಆದರೂ ನೀನು ತುಸುವೂ ಕಳವಳಗೊಳ್ಳದೇ ನಿನ್ನ ವಿಭಿನ್ನ ನಟನಾ ಶೈಲಿಯಿಂದ ಕನ್ನಡ ಜನತೆಯ ಮೆಚ್ಚಿನ ರಾಜಕುಮಾರನಾದೆ. ಉದ್ದ ಮೂಗಿನ, ಚಿಗುರು ಮೀಸೆಯ ದಷ್ಟ ಪುಷ್ಟ, ಸದೃಢ ದೇಹದ ನಿನ್ನನ್ನು ಆರಾಧಿಸುವವರ ಗುಂಪೇ ಕರ್ನಾಟಕದಲ್ಲಿ ನೆಲೆಗೊಂಡಿತು. ಬಳಿಕ ನಿನ್ನ ಭಕ್ತಿ ಪ್ರಧಾನವಾದ ಚಿತ್ರಗಳು ಜನರಿಗೆ ಸಮೂಹ ಸನ್ನಿಯನ್ನೇ ಉಂಟುಮಾಡಿದವು. ನೀನು ಭಕ್ತ ಕುಂಬಾರನಾದೆ, ಭಕ್ತ ಕನಕದಾಸನಾದೆ, ಭಕ್ತ ಚೇತನಾದೆ, ಶ್ರೀರಾಮನಾದೆ, ಕೃಷ್ಣನಾದೆ,ಅರ್ಜುನನಾದೆ, ಮಯೂರವರ್ಮನಾದೆ, ವೀರ ಪುಲಿಕೇಶಿಯಾದೆ, ಶ್ರೀ ಕೃಷ್ಣದೇವರಾಯನಾದೆ. ಪುರಾಣದ ಪಾತ್ರಗಳಿಗೆ ಅತೀವವಾದ ಜೀವ ತುಂಬುತ್ತಿದ್ದ ನಿನಗೆ ಪರಕಾಯ ಪ್ರವೇಶ ಮಾದುವ ಕಲೆ ಗೊತ್ತಿದೆ ಎಂದು ಕರ್ನಾಟಕದ ಜನತೆ ಆಗಾಗ ಅಂದುಕೊಳ್ಳುತ್ತಿದ್ದುರಲ್ಲಿ ತಪ್ಪೇನಿಲ್ಲ..

      ಕಲೆಗೆ ಜೀವ ನೀಡಿ, ಚಿತ್ರರಸಿಕರ ಮನಸಲ್ಲಿ ಅಚ್ಚಳಿಯದಂತೆ ಉಳಿದ ನೀನು ನಿನ್ನ ಜೀವನವ್ನ್ನೆಲ್ಲಾ ಕೇವಲ ಕನ್ನಡ ಸೇವೆಗೆ ಮುಡಿಪಾಗಿಟ್ಟ ನಿನ್ನ ನಿಶ್ಕಲ್ಮಶ ಕನ್ನಡಾಭಿಮಾನವನ್ನು ನಾನು ಮೆಚ್ಚಿಕೊಂಡು ನಿನ್ನಂತೆ ನನ್ನ ಕೈಲಾದ ಮಟ್ಟಿಗೆ ಕನ್ನಡ ಸೇವೆ ಮಾಡಲು ಇಂದಿನಿಂದಲೇ ಸಂಕಲ್ಪಿಸುತ್ತೇನೆ.

೧೯೯೯ ರಲ್ಲಿ ನಿನ್ನನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗ ಕಿಂಚಿತ್ತೂ ವಿಚಿಲಿತನಾಗದೇ ,ವಿಹಲ್ವಗೊಳ್ಳದೇ ೧೦೮ ದಿನಗಳನ್ನು ಸವೆಸಿದುದು ನಿನ್ನ ಧೈರ್ಯವೇ ಸರಿ. ಆದರೇ ನೀನು ಇಷ್ಟು ಅವಸರವಸರವಾಗಿ ಇಹಲೋಕ ತ್ಯಜಿಸಿ ನನ್ನನ್ನಗಲುವ ಅನಿವಾರ್ಯತೆಯೇನಿತ್ತು..? ಚಿಕ್ಕಂದಿನಿಂದಲೇ ಸಾಕಷ್ಟು ರೀತಿಯಲ್ಲಿ ಯೋಗಾಸನ ಮಾಡಿ ಸದೃಢನಗಿದ್ದ ನೀನು ಹೀಗೆ ಪ್ರಾಣತ್ಯಾಗ ಮಾಡಿ ನಿನ ಅಭಿಮಾನಿ ದೇವರುಗಳಿಂದ ಪಲಾಯನ ಮಾಡಿದುದು ನನಗ್ಯಾಕೊ ಸರಿಯೆನ್ನಿಸಲಿಲ್ಲ.. ಇವತ್ತೇಕೋ ನಾನು ತುಂಬಾ ಭಾವುಕನಾಗಿದ್ದೇನೆ. ನಿನ್ನ ಎಲ್ಲಾ ಚಿತ್ರಗಳಾನ್ನು ನೋಡಿ ಮುಗಿಸಬೇಕೆಂದಿದ್ದೇನೆ. ನಿನ್ನ ಸುಮಧುರ ಹಾದುಗಳನ್ನು ಆಲಿಸುತ್ತೇನೆ. ನಿನ್ನಂತೆ ಅಭಿನಯಿಸಲು ಪ್ರಯತ್ನಿಸುತ್ತೇನೆ. ನಿನ್ನಂತೆ ಕನ್ನಡಕ್ಕಾಗಿ, ಅಭಿಮಾನ ಮೆರೆಯುತ್ತೇನೆ. ಕರ್ನಾಟಕದ ಆಚೆ ನಿನ್ನ ಪರಿಚಯಿಸಲಿಚ್ಚಿಸುತ್ತೇನೆ. ನಿನ್ನಂತೆ ಬದುಕಲು ಕಲಿಯುತ್ತೇನೆ ಎಂಬ ಅಫಿಡೆವಿಟ್ಟಿನೊಂದಿಗೆ ಈ ಪತ್ರವನ್ನಿಲ್ಲಿಗೆ ಮುಗಿಸುತ್ತೇನೆ..

                                                                                   ಇಂತಿ ನಿನ್ನ ಅಭಿಮಾನಿ

                                                                                         ಚಿನ್ನು

ತೀರದ ನಂಟು..

ದೂರವಾಗುತ್ತಲೇ ಮತ್ತೇ ಸಮೀಪಿಸಿ

ಮುತ್ತಿಕ್ಕಿ ಹೋಗುತಿವೆ ತೊರೆಗಳು

ತೊರೆಯದೇ ತೀರದ ಬಂಡೆಗಳ…

 

ಕರಗುತಿವೆ ಬಂಡೆಗಳು ಯಾವ ಸಂಭ್ರಮಕ್ಕೋ ಸೋತು

ಸಣ್ಣವಾಗುತಿವೆ ಅರೆಘಳಿಗೆ ನಿಲ್ಲದೆಯೇ

ಓಡುತಿವೆ ತೊರೆಗಳು…

 

ಏನು ಹೆಸರೋ..? ಈ ಹೆಸರಿಲ್ಲದ ನಂಟಿಗೆ

ಅಂಟಿಸುವವರು ಯಾರೋ ನಂಟಿನ ಹೆಸರು..?

ಗಟ್ಟಿತನದ ಹೆಸರು…

 

ಬಂಡೆಗಳ ನಂಬುಗೆ ತುಂಬು ಪ್ರೀತಿಯಲಿ ಬಲಿತು

ಬೀಜವಾಗುತಲಿದೆ ಬೇರೂರಿ ತೀರದಲಿ

ತೊರೆಯದ ತೊರೆಗಳಿಗೆ ಕಾಯುತ್ತ ನಿಂತಿವೆ…

 

ಶತ ಶತಮಾನಗಳಿಂದಲೂ ಪ್ರೀತಿಯಿಂದಲೇ

ಅಪ್ಪುತಿವೆ ಒಂದನ್ನೊಂದು ಧೇನಿಸುತ್ತ…

 

                                    —ಸಚಿನ್ ಕುಮಾರ ಬಿ.ಹಿರೇಮಠ

What’s a friendship…?

“To have a friend, be a friend”

                                       by Tanu

When the days seen longer, when you want someone by your side, you feel very lonely, do I come to mind…? Do the sweetest memories of our togetherness be ever make you cry..? Do your eyes wet while thinking of the day when we said good bye? I know I had never spoken of my affection in my heart for you. But you know very well that I trusted only  you. It’s been days since we are been together. Days since after saying farewell we went but each passing moment the nature remindes me of you my dear friend…

I hope the love of our friendship may never depart. We al always be together though miles apart.Yes, these are only for you..

Only a realo friend like you can understand the unspoken words and correct the rolling tears in to smiles..

“Friendship is an everlasting relationship made by just joining  two heats”

I think of the wonderful times spent together,growing up together and I know that I spent some of the life’s best moments with friends.We can turn cver to friends whenever we need someone or something..

We are all travellers in the wilderness of the world and the best that we find in our travel is an honest friend. A friend with whom we might hare our joys and sorrows. Friendship is a bond of understanding and sharing sweet and sour moments of life together. This friendship improves happyness and abates misery, doubling our joys and dividing our grief. In all these ways friendship sweetens our life.

                                                    —–JYOTHI RANI(TANU)

ವಿನಂತಿ

ಎದೆಯ ಮುಗಿಲನು ಬರಿದು ಮಾಡಿ
ಕರಗೋ ಚಂದಿರ ಬೇಡ ಗೆಳತಿ
ಸುಧೆಯ ತಿನಿಸನು ಕರೆದು ನೀಡಿ
ಮಿರುಗೊ ಮನಸಿನ ಮಧುರ ಪ್ರೀತಿ
ಬೇಕು ಸನಿಹವೇ ಸುಂದರ..
ಏಕೆ ವಿರಹದ ಅಂತರ..?

–ಸಚಿನ್ ಕುಮಾರ ಬಿ.ಹಿರೇಮಠ

ಬಾಲ್ಯದ ಗೆಳತಿಗೊಂದು ನೆನಹು..

ಶ್ವೇತಾ ಕಳಂಜಿ..ಕ್ಯುಟ್ ಆಗಿ, ಸ್ವೀಟ್ ಆಗಿ ಬಾಬ್ ಕಟ್ ಕೂದಲಿನ ಹುಡುಗಿ. ಹೂವುಗಳನ್ನು ಪೋಣಿಸಿದಂತಹ ಫ್ರಾಕ್ ಜೊತೆಗೆ ಮಿಕ್ಸಡ್ ಶೂಸ್ ಹಾಕ್ಕೊಂಡು ನಗುವರಳಿಸುವ ಹುಡುಗಿ.  ನಿಜ..ಶ್ವೇತಾ ನನ್ನ ಬಾಲ್ಯದ ಗೆಳತಿ. ನೋಡಲು ಹೆಚ್ಚು ಕಡಮೆ ರಮ್ಯ ಕೃಷ್ಣ ನಂತೆ ನಳನಳಿಸುವ ಹುಡುಗಿ. ನಾನು ಮೂರನೇ ತರಗತಿಯಲ್ಲಿರುವಾಗ ಪರಿಚಯವಾದ ಿವಳು ನಾನು ಐದನೆ ವರ್ಗಕ್ಕೆ ಬರುವ ಹೊತ್ತಿಗೆ ನನಗೆ ಪೆಟ್ ಫ್ರೆಂಡ್ ಆದವಳು. ತುಸು ಕೋಪದ ಹುಡುಗಿ. ಮೂಗಿನ ಮೇಲೆ ಸಿಟ್ಟು ಅಂತಾರಲ್ಲ ಹಾಗೇ..!

                                  ಶಾಲಾ ದಿನಗಳನ್ನು ನೆನೆಸಿಕೊಂಡರೆ ಸಾಕು. ಇವಳದ್ದೇ ಸಿಂಹಪಾಲು. ನಮ್ಮ ಶಿಕ್ಷಕರು ತರಗತಿಗೆ ಒಬ್ಬೊಬ್ಬ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಆರೋಗ್ಯಮಂತ್ರಿ, ಹಣಕಾಸಿನ ಮಂತ್ರಿ ಎಂದೆಲ್ಲ ಶಾಸಕ ಸ್ಥಾನಗಳನ್ನು ಹಂಚಿಕೊಡುವಾಗ ಇವಳಿಗೇ ಮುಖ್ಯಮಂತ್ರಿಯ ಪಟ್ಟ.. ನಾನು ಉಪ ಮುಖ್ಯಮಂತ್ರಿಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತಿತ್ತು. ಓದಿನಲಿ ಬಲು ಜಾಣೆ. ನನಗೆ ನೆನಪಿರುವ ಪ್ರಕಾರ ಇವರದು ಒಂದು ಹೋಟೆಲ್ಲಿತ್ತು. ಅಲ್ಲಿ ಬೋಂಡಾ ಪ್ರಸಿದ್ಧವಿದ್ದುದರಿಂದ ನಾನು ಅವಳಿಗೆ ಬೋಂಡಾ ಬಜ್ಜಿ ಎಂದು ಕರೆಯುತ್ತಿದ್ದೆ(ಅವಳ ೆದುರಿಗೆ ಕರೆದಿದ್ದರೆ ಅವಳು ಬಹುಶಃ ಸಾಯಿಸಿಬಿಡುತ್ತಿದ್ದಳೇನೋ..). ಅವಳೊಂದಿಗೆ ಓದಿನಲ್ಲಿ, ಆಟದಲ್ಲಿ ಸ್ಪರ್ಧಿಸುತ್ತಿದ್ದೆ. ತುಂಬಾ ಪ್ರಾಮಾಣಿಕಳಾದ ಅವಳು ನನ್ನನ್ನು ಕೆಲವು ಸಲ ಅವಳ ಗೆಳತಿ(ನನ್ನ ಗೆಳತಿ ಸಹ) ಯೊಡನೆ ಸೇರಿ “‘ಹೀರಿಕಾಯಿ’ ಎಂದು ಕಾಡಿಸುತ್ತಿದ್ದಳು.

                           ಇವಳದ್ದು ಆಗ ದಿಟ್ಟತನದ ಸ್ವಭಾವ,ನೇರ ಮಾತು. ಹುಡುಗರನ್ನು ಕಂಡು ನಾಚುವುದು, ಅಂತರ್ಮುಖಿಯಾಗಿರುವು ಇವಳಿಗೆ ಇಷ್ಟವಿರಲಿಲ್ಲ. ಆ ವಯಸ್ಸಿನಲ್ಲೆ ಅಷ್ಟೊಂದುಚೆನ್ನಾಗಿ, ಹಸನ್ಮುಖಿಯಾಗಿ ಅವಳಾಡುತ್ತಿದ್ದ ಮಾತುಗಳು ನಿಜಕ್ಕೂ ಪ್ರಶಂಸನೀಯ..1995ನೇ ಇಸವಿ. ನಾನು 5ನೇ ತರಗತಿ ಪಾಸಾಗಿ 6ನೇ ತರಗತಿಗೆ ಬಿಜಾಪುರಕ್ಕೆ ಬಂದೆ. ಆಗ ಅವಳು ನನ್ನಿಂದ, ನನ್ನ ಮನೋಸಂಪುಟದಿಂದ ಸಂಪೂರ್ಣವಾಗಿ ದೂರಾದಳು.

2009ನೇ ಇಸವಿ, ಅಂದರೆ ಸುಮಾರು 14 ವರ್ಷದ ಬಳಿಕ ಮತ್ತೆ ಸಿಕ್ಕಿದ್ದಾಳೆ. ಈಗ ನೋಡಲು ಹೆಗೆ ಇದ್ದಾಳೋ ಏನೋ..ಅವಳು ಎದುರಿಗೆ ಬಂದಾಗ ನಾನು ಶೂನ್ಯನಾಗುತ್ತೇನೆ..ಅವಳೇನೋ ಸಿಕ್ಕಿದ್ದಾಳೆ.ಆದರೆ ಆ ಮಧುರ ಕ್ಷಣಗಳ ಬಾಲ್ಯು ಮತ್ತೆ ಬರಲಾರದೆಂದು ದುಃಖಿಸುತ್ತೇನೆ..

                                                       —ಸಚಿನ್ ಕುಮಾರ ಬಿ.ಹಿರೇಮಠ

ಹೀಗೊಬ್ಬ ದೇವರು…

ಅದು 2003ನೇ ಇಸವಿ. ನಾನು ಆಗ ತಾನೆ ಪಿಯುಸಿ ಮುಗಿಸಿದ್ದೆ. ಪಿಯುಸಿಯಲ್ಲಿ ಮೊದಲ ಶ್ರೇಣಿಯಲ್ಲಿ ಪಾಸಾಗಿದ್ದರೂ ಆರ್ಥಿಕ ತೊಂದರೆಯಿಂದ ಇಂಜಿನಿಯರಿಂಗ್, ಮೆಡಿಕಲ್ ಗಳಂತಹ ವೃತ್ತಿಪರ ಕೋರ್ಸುಗಳಿಗೆ ನನಗೆ ಸೇರಲಾಗಲಿಲ್ಲ. ನನ್ನ ಚಿಕ್ಕಪ್ಪನವರ ಸಲಹೆ ಮೇರೆಗೆ ಡಿ.ಇಡಿ ಮಾಡುವ ನಿಟ್ಟಿನಲ್ಲಿ ಕೋರ್ಸಿಗೆ ಅರ್ಜಿ ಸಲ್ಲಿಸಿದೆ. ಆದರೆ ಅದರಲ್ಲೂ ನನಗೆ ನಿರಾಸೆ ಕಾದಿತ್ತು. ನಾನು ಸಾಮಾನ್ಯ ವರ್ಗದ ಕೆಟಗರಿಯಲ್ಲಿ ಬರುತ್ತಿದ್ದುದರಿಂದ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿದ ಶೇಕಡಾ ಅಂಕಗಳಿಗಿಂತ(cut off percentage) ನನ್ನ ಪಿಯುಸಿ ಅಂಕಗಗಳು ತುಸು ಕಮ್ಮಿ ಇದ್ದವು. ನಿರಾಸೆಯೊಂದಿಗೆ ಸ್ಥಳೀಯ ಸಂಸ್ಥೆಯಲ್ಲಿ ಟೈಪಿಂಗ್ ಕ್ಲಾಸ್ ಗೆ ಸೇರಿಕೊಂಡೆ .

        ಒಂದು ವಾರದ ಬಳಿಕ ನನ್ನ ಚಿಕ್ಕಪ್ಪನಿಂದ ನನಗೆ ಕರೆ ಬಂತು. ” ‘ವಿಜಯ ಕರ್ನಾಟಕ’ದಲ್ಲಿ ಡಿ.ಇಡಿ ಕೋರ್ಸಗೆ ಪರಿಷ್ಕೃತ ಶೇಕಡಾ ಅಂಕಗಳನ್ನು ಕೇಂದ್ರೀಕೃತ ದಾಖಲಾತಿ ಘಟಕದವರು ಪ್ರಕಟಿಸಿದುದರ  ಅಧಿಸೂಚನೆಯೊಂದು ವಿಜಯ ಕರ್ನಾಟಕದಲ್ಲಿದ ಪ್ರಕಟಗೊಂಡಿದೆ, ಓದಿಕೊಂಡು ಮುಂದುವರಿ” ಎಂದು ನನಗೆ ವಿಜಯ ಕರ್ನಾಟಕ ಪತ್ರಿಕೆಯನ್ನು ಗಮನಿಸಲು ಸೂಚಿಸಿದರು. ಆವತ್ತು ಆ ಪ್ರಕಟಣೆ, ವಿಜಯ ಕರ್ನಾಟಕ ಪತ್ರಿಕೆಯೊಂದನ್ನು ಹೊರತು ಪಡಿಸಿ ಬೇರೆ ಯಾವ ಪತ್ರಿಕೆಯೂ ಪತ್ರಿಕೆಯಲ್ಲೂ ಪ್ರಕಟಗೊಂಡಿರಲಿಲ್ಲ. ಅದಲ್ಲದೇ ಅಲ್ಲಿ ನಿಗದಿ ಪಡಿಸಿದ ಶೇಕಡಾ ಅಂಕಗಳಿಗಿಂತ ನನ್ನ ಪಿಯುಸಿ ಶೇಕಡಾ ಅಂಕಗಳು ಹೆಚ್ಚಾಗಿದ್ದಿದ್ದರಿಂದ ನನಗೆ ಮೂರು ದಿನದಲ್ಲಿ ಡಿ.ಇಡಿ ಕೋರ್ಸಿಗೆ ಪ್ರವೇಶ ಸಿಕ್ಕಿತು. ಆ ಸಮಯದಲ್ಲಿ ನನ್ನ ಚಿಕ್ಕಪ್ಪ ಮತ್ತು ವಿಜಯಕರ್ನಾಟಕ ನನ್ನ ಪಾಲಿನ ದೇವರೆಂದೇ ಹೇಳಬೇಕು. ಬಳಿಕ ನಾನು 2007ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆಗೆ ಸೇರಿದೆ. ನನ್ನ ಇಂದಿನ ಸುಸ್ಥಿತಿಗೆ ನನ್ನ ಚಿಕ್ಕಪ್ಪ ಮತ್ತು ವಿಜಯ ಕರ್ನಾಟಕ ಪತ್ರಿಕೆಯೇ ಕಾರಣವೆಂಬುದನ್ನು ಅಲ್ಲಗಳೆಯುವಂತಿಲ್ಲ..  

                                       ಸಚಿನ್ ಕುಮಾರ ಬಿ.ಹಿರೇಮಠ

ಪ್ರೀತಿ..!

ನನ್ನ ಕಣ್ಣ ನೋಟ

ನಿನ್ನ ಕಣ್ನ ನೋಟ ಒಂದೇ 

ಅದುವೇ ಪ್ರೀತಿ…

ಹೇಳಲು  ಆಗದೆ ಕಣ್ಣುಗಳಿಂದಲೇ

ಹೇಳುತ್ತೇನೆ, ನಾ ನಿನ್ನ

ಪ್ರೀತಿಸುತ್ತೇನೆ…

  

       —ಸಂಗಣ್ಣ ಭೀ.ಪೂಜಾರಿ, ಭೀಮರಾಯನ ಗುಡಿ.

ನನ್ನ ಹವಣಿಕೆ, ನಿನ್ನುಸಿರಿನ ಎಣಿಕೆಗಿಂತಲೂ ಮಿಗಿಲು..

u176493221ಪ್ರೀತಿ ಎಂದರೆ ಹಾಗೇನೆ..! ರೆಪ್ಪೆ ಮಿಟುಕಿಸುವುದರಷ್ಟರಲ್ಲಿ ಎದೆಯೊಳಗೆ ಹುಟ್ಟಿಕೊಂಡು ಬಿಡುತ್ತದೆ. ಪ್ರೀತಿ ಹುಟ್ಟೋಕೆ ಯಾವ ಕಾರಣವೂ ಬೇಕಿಲ್ಲ. ನೋಡ ನೋಡುತ್ತಲೇ, ನೋಡದೇನೆ, ಮಾತಾಡುತ್ತ, ಮಾತಿಲ್ಲದೆ, ಪ್ರೀತಿ ಅವತರಿಸಿಬಿಡುತ್ತದೆ. ಹೀಗೆ ಹುಟ್ಟುವ ಪ್ರೀತಿ ನಿಶ್ಕಲ್ಮಶವಾಗಿರುತ್ತದೆ. ಪ್ರೀತಿ ಜಾತಿ, ಕುಲ,ಭೇದ, ದೇಶ, ಭಾಷೆ – ಹೀಗೆ ಯಾವಿದಕ್ಕೂ ಜಗ್ಗದೇ ಸೀಮಾತೀತವಾಗಿರುತ್ತದೆ. ಮೊದಮೊದಲು ಸ್ನೇಹದಲ್ಲಿ ಈ ಪ್ರೀತಿ ನೆಲೆಗಂಡು ಮೊಗ್ಗಾಗಿ, ಅರಳಿ ಹೂವಾಗಿ  ಬೀರುವ ಕಂಪಿನ ಖದರ್ರೇ ಬೇರೆ.

                      ನಿಜಕ್ಕೂ ಪ್ರೀತಿ ಮಧುರ. ೊಮ್ಮೆ ಈ ಹುಡುಗುಗೆ ಅಪಘಾತವಾಗಿ ರಕ್ತಸ್ರಾವವಾಗಿ ಆಸ್ಪತ್ರೆಯಲ್ಲಿದ್ದಳು. ಇವಳದು o+ve ರಕ್ತದ ಗುಂಪು. ಅಂದೊಂದು ದಿನ ಎಂದಿನಂತೆ ಈ ಹುಡುಗ ಾಸ್ಪತ್ರೆಗೆ ಬಂದು ರಕ್ತದಾನ ಮಾಡಿದ. ಾಶ್ಚರ್ಯವೆನೆಂದರೆ ಅವನದೂ o+ve ರಕ್ತದ ಗುಂಪು.  ರಕ್ತದಾನದ ಬಳಿಕ ಿವಳ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದ. ಇವಳದು ಮಾಸದ ಚೆಲುವು. 20 ರ ಆಸು ಪಾಸಿನ ಈ ಹುಡುಗಿಯನ್ನು ನೋಡುತ್ತಲೇ ಹೊರ ನಡೆದ. ಈ ಹುಡುಗಿ ತನಗೆ ರಕ್ತ ನೀಡಿದವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ವೈದ್ಯರಲ್ಲಿ ವಿಚಾರಿಸಿದಳು. ಇವನು ಆರು ತಿಂಗಳಿಗೊಮ್ಮೆ ಬಂದು ತಪ್ಪದೇ ರಕ್ತದಾನ ಮಾಡುತ್ತಿದ್ದುದರಿಂದ ಇವನು ಹೆಸರು, ಮೊಬೈಲು ನಂಬರ್ರು ಅವರ ಬಳಿ ಇತ್ತು. ಆ ಹುಡುಗಿ  ಅದನ್ನೆಲ್ಲ ಸಂಪಾದಿಸಿ ಇವನಿಗೊಂದು ಕರೆ ಮಾಡಿ ವಂದಿಸಿದಳು. ಇವರ ನಡುವೆ ಸ್ನೇಹದ ಬಳ್ಳಿ ಹಬ್ಬಿಕೊಂಡಿತು. ಬರಬರುತ್ತ ಇವರ ಮೊಬೈಲಿನಲ್ಲಿ ಸ್ನೇಹಕ್ಕೆ ಸಂಬಂಧಿಸಿದ ವ್ಯಾಖ್ಯೆಗಳು, ಜೋಕುಗಳು, ಮಹಾಶಯರ ುಕ್ತಿಗಳು – ಹೀಗೆ ನೂರಾರು ಸಂದೇಶಗಲೂ ಸುಳಿದಾಡತೊಡಗಿದವು. ಇವಳ ಬಗೆಗಿನ ಭಾವಗಳು, ಇವಳ ಸ್ವಭಾವ ಹುಡುಗನಿಗೆ ಮೆಚ್ಚುಗೆಯಾಯಿತು. ಅವಳಿಗೂ ಅಷ್ಟೇ..ಇವನ ಸಂದೇಶಗಳು ಇವಳಿಗೆ ಹುಚ್ಚು ಹಿಡಿಸಿದ್ದವು. ಒಂದು ಕ್ಷಣ ಅವನು ಮೆಸೇಜು  ಬರುವುದು ತಡವಾದರೂ ಇವಳಿಂದ ‘hey wat happnd? plz reply’ ಎಂಬ ಸಂದೇಶ ಬಂದು ಬಿಡುತ್ತಿತ್ತು. ಒಂದಿನ ಯಾರೋ ಕಳಿಸಿದ ಮೆಸೆಜೊಂದನ್ನು ಇವನಿಗೆ ತೇಲಿಸಿ ಬಿಟ್ಟಳು; ಅದು ಹೀಗಿತ್ತು:

                     ನಿಮ್ಮ ಗೆಳತಿಯರಲ್ಲಿ ನಿಮಗೆ ನಿಮ್ಮ ಬಾಳ ಸಂಗಾತಿಯನ್ನಾರಿಸುವ 

                       ಅವಕಾಶ ನಿಮಗೆ ಒದಗಿ ಬಂದರೆ ನೀವು

                      ಯಾರನ್ನು ಆರಿಸುತ್ತೀರಿ.. frank  ಆಗಿ ಹೇಳಿ..

ಇವನಿಗೆ ಈ ಸಂದೇಶ ಓದಿ ಆಶ್ಚರ್ಯವಾಯಿತು. ಗೆಳೆತಿಯರಲ್ಲಿ ಬಾಳ ಸಂಗಾತಿಯನ್ನಾರಿಸುವುದೇ..?ಛೇ ಎಂದುಕೊಂಡು ಒಂದು ಮೆಸೇಜನ್ನು ಇವಳಿಗೆ ರವಾನಿಸಿದ. 

                   ಸ್ನಹೇದಲ್ಲಿ ಬಹುಶಃ ಇದು ಸಾಧ್ಯವಾಗದ ಮಾತು

                   ನಿಮಗೇ ಈ ಅವಕಾಶ ೊದಗಿ ಬಂದಲ್ಲಿ

                  ನೀವು ಯಾರನ್ನೂ ಆರಿಸುತ್ತೀರಿ..ladies first…? 

ಇವನ ೀ ಸಂದೇಶ ಅವಳಲ್ಲಿ ಕಳವಳವನ್ನುಂಟು ಮಾಡಿತು. ಅವನ ಜಾಣತನವನ್ನು ಅವಳು ಮೆಚ್ಚಿಕೊಂಡಳು.ಮುಗುಳ್ನಗುತ್ತ ಹೀಗೆ ಬರೆದಳು:

                  ಬಹುಶಃ ನಾನು ನನಗೆ ಇಷ್ಟವಾಗುವ

                 ನನ್ನ ಾಸೆ ಆಕಾಂಕ್ಷೆಗಳಿಗೆ, ನೋವಿ ನಲಿವಿಗೆ

                  ಸ್ಪಂದಿಸುವ ಗೆಳೆಯನನ್ನ ಆರಿಸಿಕೊಳ್ಳುತ್ತೇನೆ.

                for example..ನಿಮ್ಮಂಥವರನ್ನ…

ಹುಡುಗನಿಗೆ ಎದೆಯೊಳಗೆ ಪುಳಕವುಂಟಾಯಿತು. ಅವಳ ೀ ಸಂದೇಶ ಅವನಲ್ಲಿ ಒಂದು ಬಗೆಯ ಆಸೆಯನ್ನು ಹುಟ್ಟು ಹಾಕಿತಾದರೂ ಇದೆಲ್ಲ ಬರೀ ಆಕರ್ಷಣೆ ಎಂದು ಎಲ್ಲವನ್ನೂ ತಳ್ಳಿಹಾಕಿದ. ನಾಲ್ಕಾರು ದಿನ ಅವಳ ಮೆಸೇಜುಗಳಿಗೆ ಉತ್ತರಿಸಲಿಲ್ಲ.. ಆದರೆ ಅವಳಿಂದ ಹಾರಿ ಬರುತ್ತಿದ್ದ ಶಾಯರಿಗಳನ್ನು, ಹುಚ್ಚು ಸಂದೇಶಗಳು ಇವನ ಮೊಬೈಲನ್ನು ಮನಸ್ಸನ್ನೂ ಬೆಳಗಿಸುತ್ತಲೇ ಇದ್ದವು. ವಾಸ್ತವದಲ್ಲಿ ಅವಳಿಗೆ ಇವನಲ್ಲಿ ಪ್ರಿತಿ ಉಂಟಾಗಿತ್ತು. ಅವಳು ಕಳಿಸಿದ ಮತ್ತೊಂದು ಸಂದೇಶ ಹೀಗಿತ್ತು:

                       ಅಂಜಾನ್ ಹೋತೆ ಹುವೆ ಭೀ ಆಪ್

                      ಕುಛ್ ಜಾನ್ ಪೆಹಚಾನ್ ಲಗತೇ ಹೈ

                       ದೂರ್ ಹೋತೆ ಹುವೆ ಭೀ ಆಪ್

                       ಇಸ್ ದಿಲ್ ಕಿ ಪಾಸ್ ರೆಹತೇ ಹೈ

                      ಧಡಕ್ ತೀ ಹೈ ಯೆ ದಿಲ್ ದಿನ್ ಔರ್ ರಾತ್

                      ಮಗರ್ ಕಹ್ ನಹಿ ಪಾತಾ ಅಪನಿ ದಿಲ್ ಕೀ ಬಾತ್

ಅವಳು ಇವನಿಗೆ ಪರಿಚಯವಾಗಿ ಸುಮಾರು ಎಂಟು ತಿಂಗಳುಗಳಾಗಿರಬಹುದಷ್ಟೇ. ಆದರೆ ಇವರಿಬ್ಬರ ನಡುವೆ ಆತ್ಮೀಯತೆ ಎಲ್ಲೆ ಮೀರಿತ್ತು.ಅವಳ ಮೆಸೇಜು ಬರುವುದು ತಡವಾದರೆ ಸಾಕು ಇವನು  ಅವಳ ಮೊಬೈಲಿಗೆ ರಿಂಗಣಿಸಿ network check ಮಾಡುತ್ತಿದ್ದ. ತನ್ನ ಮೊಬೈಲಿಂದ ಕಳುಹಿಸಿದ ಮೆಸೇಜಿಗೆ delivery report ಬರುವ ತನಕವೂ ಕಾಯುವ ಸಂಯಮ ಇವನಿಗಿಲ್ಲ..ಒಂದೊಮ್ಮೆ ಅವಳಿಂದ ಹೀಗೆ ಸಂದೇಶ ಬಂದಿತ್ತು:

                      ಖೂನ್ ದೇಕರ್ ಹಮೇ ಜಿಂದಗೀ ದೀ

                      ದಿಲ್ ಲೇಕರ್ ಅಬ್ ಜಿಂದಗೀ ಲೀ

                      ಕ್ಯಾ ಹೈ ಆಪಕಾ ಯ ಚಾಲ್

                     ಜರಾ ದೇಖೋ ಹಮಾರಿ ಬೂರಿ ಹಾಲ್

ಈಗಂತೂ ಹುಡುಗನ ಹೃದಯ ತಹಬದಿಗೆ ಸಿಕ್ಕದಂತಾಯಿತು. ತಮ್ಮೊಳಗೆ ಇಂಥ ಪ್ರೀತಿ ಸಾಧ್ಯಾನಾ..? ಇದು ನಿಜವಾಗಲೂ ಪ್ರೀತಿನಾ..? ತನ್ನ ಮನೆಯವರು ಇವಳನ್ನು ಒಪ್ಪಿಕೊಳ್ಳುತ್ತಾರಾ..ನನ್ನನ್ನು ಇವರ ಮನೆಯವರು ಒಪ್ಪಿಕೊಳ್ಳುತ್ತಾರಾ..? ಮೇಲಾಗಿ ಸಮಾಜಕ್ಕೆ ನಮ್ಮ ಪ್ರೀತಿಯನ್ನು ಒಪ್ಪವಾಗಿ ಕಾಣುವುದಾ..? ಎಂದೆಲ್ಲ ಯೋಚಿಸಿ ಇವನು ಒಂದು ಸಂದೇಶ ತೇಲಿಸಿದ:

                          ಕ್ಯಾ ಆಪ್ ಮಾನೋಗೆ ಇಸ್ ಅಜೀಬ್ ಕೋ

                          ಕಿ ಪ್ಯಾರ್ ಕಭೀ ಮಿಲ್ ಜಾಯೆಗಾ ಇಸ್ ಗರೀಬ್ ಕೋ?

                         ಚಲ್ ಅಪನಿ ರಾಹ್ ಚಲ್ ಜಾವೋಗೆ ಮಿಂಟೋಮನೆ..

                         ಕ್ಯೂ ಚಲತಿ ಹೈ ಇಸ್ ಪತ್ಯರ್ ಕಾಂಟೋಮೆ..?

ಅವಳೀಗೆ ಿವನ ಮನಸಿನ ತಾಕಲಾಟ ಅರ್ಥವಾಯಿತು. ರಕ್ತ ಕೊಡುವಾಗ ಇವನು ಯಾರ ಅಂತಸ್ತು, ಐಶ್ವರ್ಯ, ಜಾತಿ, ಭೆದ ನೋಡಲಿಲ್ಲ. ಈಗ ಈ ಪ್ರೀತಿ ಕೊಡುವಾಗ ಯಾಕೆ ಇವನ್ನೆಲ್ಲ ನೋಡುತ್ತಿದ್ದಾನೆ. ನನಗವನು ಸಿಗಲಿ, ಬಿಡಲಿ. ಎಲ್ಲಿಯವರೆಗೆ ಈ ದೇಹದಲ್ಲಿ ಉಸಿರಿರುವುದೋ ಅಲ್ಲಿಯವರೆಗೆ ನಾನಂತೂ ಅವನನ್ನು ಪ್ರೀತಿಸುತ್ತಿರುತ್ತೇನೆ ಎಂದು ಇವಳು ಮತ್ತೊಂದು ಸಂದೇಶ ರವಾನಿಸಿದಳು:

                 ಹರ್ ಏಕ್ ಚೀಜ್ ಚಾಹನೆ ಸೆ ಮಿಲ್ ತಿ ನಹೀ

                 ಪ್ಯಾರ್ ಕಿ ಕಲಿ ಹರ್ ಏಕ್ ಕೇ ಲಿಯೆ ಖಿಲ್ ತಿ ನಹೀ

                 ಪರ್ ಹರ್ ಏಕ್ ಕೊ ಐಸಿ ಕಿಸ್ಮತ್ ಮಿಲ್ ತಿ ನಹೀ..

ನಿಜ.. ಪ್ರೀತಿಯ ಸೌಖ್ಯ  ಹೀಗೆನೆ..ಹಣೆಬರಹವನ್ನು ಹಳಹಳಿಸುತ್ತಲೇ ಪ್ರೀತಿ ಪಡೆಯಬೆಕಾಗುತ್ತದೆ.  ಅವನು ಇವಳಿಗೊಂದು ಸಂದೇಶ ರವಾನಿಸಿದ:

                  ಜಿಂದಗಿ ಇತನಿ ತನ್ಹಾಯಿ ಕ್ಯೂ ಹೋತಿ ಹೈ..?

                  ಸಬ್ ಕೊ ಕಿಸ್ಮತ್ ಸೆ ಶಿಕಾಯತ್ ಕ್ಯೂ ಹೋತಿ ಹೈ..?

                 ಯೆ ಕಿಸ್ಮತ್ ಭೀ ಕಿತನಾ ಅಜೀಬ್ ಖೇಲ್ ಖೇಲ್ ತಿ  ಹೈ

                 ಜಿಸೆ ಪಾನಾ ಮುಶ್ಕಿಲ್ ಹೋ, ಪ್ಯಾರ್ ಉಸೀಸೆ ಹೋ ಜಾತಿ ಹೈ..

 ಪ್ರಿತಿಯ ವೈಶಿಷ್ಟ್ಯವೇ ಅಂಥಹದ್ದು. ಪ್ರಿತಿ ಪಡೆಯುವುದು ಅಂದರೆ ಪ್ರೀತಿಸಿದವರನ್ನು ಒಂದು ಸಂಬಂಧಕ್ಕೆ ಕಟ್ಟಿಕೊಳ್ಳುವುದಾ..? ಅಥವಾ ಎಲ್ಲೆ ಇರಲಿ, ಹೇಗೆ ಇರಲಿ ಅವರ ಸೌಖ್ಯವನ್ನು ಬಯಸಿ ಪ್ರೀತಿಸುತ್ತಲೇ ಇರುವುದಾ..? ಪ್ರೀತಿಯ ಗೂಢಾರ್ಥವನ್ನು ತಿಳಿಯದೇ ಹಲವಾರು ಹುಡುಗ ಹುಡುಗಿಯರು ಇಂದು ತಮ್ಮ ಅಮೂಲ್ಯವಾದ ಪ್ರಾಣಕ್ಕೆ ಸಂಚು ತಂದುಕೊಳ್ಳುತ್ತಿದ್ದಾರೆ. ಪ್ರೀತಿ ಎಂದೂ ಸಾಯುವುದಿಲ್ಲ.. ಅದು ಅಮರ. ಪ್ರೀತಿಸುವ ಮನಸ್ಸುಗಳು ಎಂದೆಂದೂ ಒಂದೇ..ದೇಹಗಳು ಭೌತಿಕವಾಗಿ ದೂರವಾಗಬಹುದು. ಇದನ್ನೆಲ್ಲ ನಾವು ಅರಿಯಬೇಕಷ್ಟೇ. ಅವಳು ಭಾವ ಪರವಶಳಾಗಿ ಕಳುಹಿಸಿದ ಸಂದೇಶ ಹೀಗಿತ್ತು:

                    ತಮನ್ನಾವೋಂ ಕೆ ದಿಲ್ ಮೆ ಫಿಜಾ ಹೋತಿ ಹೈ

                    ಹಸರತೇ ಲಬೋಂ ಪೆ ಆಯೆ ತೊ ದುವಾ ಹೋತಿ ಹೈ

                   ಚಲೋ ಉಸೆ ದಿಲ್ ಹಿ ದಿಲ್ ಮೆ ಚಾಹೆ

                    ಸುನಾ ಹೈ, ದಿಲ್ ಕೊ ದಿಲ್ ಸೆ ರಾಹ್ ಹೋತಿ ಹೈ

ಎಷ್ಟು ಪ್ರಸ್ತುತ ಅಲ್ಲವಾ..? ಪ್ರೀತಿ ಹೃದಯಗಳ ವಿಷಯ. ಪ್ರೀತಿಯಲ್ಲಿ ಹೃದಯಕ್ಕೆ ಹೃದಯವೇ ದಾರಿ ಕೆಲವೊಂದು ಸಲ ಈ ದಾರಿ ತಪ್ಪಿದಲ್ಲಿ ನೋವು ಬಳುವಳಿಯಾಗಿ ಸಿಗುತ್ತದೆ.ಪ್ರೀತಿ ಮಧುರ ಕ್ಷಣಗಳ ಸಂಚಿಕೆ. ಅದರ ಅವಶ್ಯಕತೆಯನ್ನು ಈ ಶಾಯರಿ ಮೂಲಕ ಅವಳಿಗೆ ತಿಳಿಸಿದ ಅದು ಹೀಗಿತ್ತು:

                 ೇಕ್ ಹಸೀನ್ ಪಲ್ ಕಿ ಜರೂರತ್ ಹೈ ಹಮೆ

                 ಬೀತೆ ಹುವೆ ಕಲ್ ಕಿ ಜರೂರತ್ ಹೈ ಹಮೆ

                 ಸಾರಾ ಜಮಾನಾ ರೂಠ ಗಯಾ ಹಮ್ ಸೆ

                 ಜೊ ಕಭಿ ನ ರೂಠೆ ಐಸೆ ಪ್ಯಾರ್ ಕಿ ಜರೂರತ್ ಹೈ ಹಮೆ

ದಿನಗಳೆದವು. ಇವರ ಪ್ರೀತಿ ಹೆಮ್ಮರವಾಗಿ ಹೂವರಳಿಸಿತ್ತು. ಅದೊಂದು ನಿರ್ಮಲ, ನಿಶ್ಕಲ್ಮಶ, ನಿರಂತರವಾದ ಪ್ರೀತಿ. ಮನೆಯಲ್ಲಿ ಹಿರಿಯರು ಯಾರನ್ನೇ ನೋಡಲಿ, ಯಾರ ಜತೆಗೆ ಬೇಕಾದರೂ ಸಪ್ತಪದಿ ತುಳಿಸಲಿ, ಮನಸ್ಸು ಮಾತ್ರ ಪ್ರಿತಿಸಿದವನಿಗೆ ಮುಡಿಪಾಗಿರುತ್ತದೆ. ಪ್ರೀತಿ ಮಧುರವಾದ ಅನುಭೂತಿ..ಹೆತ್ತವರ ಸಂತೋಷಕ್ಕೆ ಪ್ರೀತಿ ತ್ಯಾಗ ಅಂತಾರಲ್ಲ..ತ್ಯಾಗ ಪ್ರೀತಿಯ ಒಂದು ಆಯಾಮ. ಇವರಿಬ್ಬರೂ ಈಗ ಅದೇ ಅಂಚಿನಲ್ಲಿದ್ದಾರೆ.ಮನೆಗಳಲ್ಲಿ ತಮ್ಮಪ್ರೀತಿಯನ್ನು ಹೇಳುವ ಸಾಹಸವನ್ನಂತೂ ಮಾಡಿದ್ದಾರೆ. ಹಿರಿಯರ ಒಂದೊಳ್ಳೆನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಅವಳ ಪ್ರೀತಿಗೆ ಈತ ಹೀಗೆ ಉತ್ತರಿಸಿ ಅಕಾಯುತ್ತಿದ್ದಾನೆ..

                   ಬಹಾನೆ ಬಹಾನೆ ಸೆ

                  ತೇರಿ ಬಾತ್ ಕರತೇ ಹೈ

                  ಹರ್   ಪಲ್  ತೇರಿ ಯಾದ ಕರತೇ ಹೈ

                   ಇತನೀ ಬಾರ್ ತೊ ಆಪ್ ಸಾಂಸ್ ಭೀ

                   ನಹೀ ಲೇತೆ ಹೋಂಗೆ,

                   ಜಿತನೀ ಬಾರ್ ಹಮ್ ಆಪಕೋ ಯಾದ್ ಕರತೇ ಹೈ..

     ಅವಳೂ ಸಹ ಬದುಕನ್ನು ಬೊಗಸೆಯಲ್ಲಿ ಹಿಡಿದುಕೊಂಡು ಇವನಿಗಾಗಿ ಕಾಯುತ್ತಿದ್ದಾಳೆ.. 

 

                            —ಸಚಿನ್ ಕುಮಾರ ಬಿ.ಹಿರೇಮಠ

ಭಾವ ಬಸಿರಿನ ಕೂಸು..

ಇದು ಬರಿ ಕವಿತೆಯಷ್ಟೇ ಅಲ್ಲ..ಭಾವ ಬಸಿರಿನ ಕೂಸು

ನನಸಿಗೆ ಬೆಸೆದುಕೊಂಡಿರುವ ಬೆಚ್ನೆಯ ಕನಸು

ಗವ್ವನೇ ಹೊದ್ದುಕೊಂಡ ಕತ್ತಲೆಯ ಸೆರಗನ್ನು

ಹಿಡಿದೆಳೆದು ಅಂತರ್ಯವನ್ನು ನಗ್ನಗೊಳಿಸಿದ  ಜ್ಯೋತಿ ನೀನು

ಇಗೋ ನಿನ್ನಲಿ ನನ್ದೊಂದು ನಿವೇದನೆ..

 

ಕಣ್ಣು ತೆರೆದರೆ ಸಾಕು ತೆರೆದುಕೊಳ್ಳುತ್ತದೆ ನಿನ್ನದೇ

ಸಿಟ್ಟು, ಸೆಳತ, ಸಲುಗೆ, ಸ್ನೇಹ, ನಗು ಒಲುಮೆ ತುಂಬಿದ ಚೆಲುವು

ಹಾಗೆಂದು ಕಣ್ಣು ಮುಚ್ಚಿಕೊಂಡರೂ ಪದೇ ಪದೇ

ನೆನಪಾಗುತ್ತೀಯ , ಇಳಿಯುತ್ತಿಲ್ಲ ನಿನ್ನ ಸ್ವಚ್ಛಂದದ ಮನಸಿನ ಏಕತಮ ಕಾವು

 

ತಣಿಸಿ ಒಲಿಸುವುದು ಸುರಿವ ಸೋನೆ ಮಳೆ

ನಲಿವುದು ಕ್ಷಣ ಕ್ಷಣಕೂ ಸೌಗಂಧ ಸೂಸಿ ಇಳೆ

ಅಂತೆಯೇ ಹುಡುಗಿ ನನ್ನೆದೆ ನೆನೆವುದು ನಿನ್ನ ನೆನೆವಾಗ

ಇಂಥ ರಮಣೀಯತೆ ಮುಂದೆ ತೃಣ ಮಾತ್ರ ಸಿರಿ ಭೋಗ

 

ಹೂವು ನೀಡಿ ಹೃದಯ ಒಪ್ಪಿಸುವುದೆಲ್ಲಾ ಹಳತು

ಪದಕೆ ಭಾವ ಬೆರೆಸಿ, ಬೆರೆಸು ಮೌನಕೆ ಮಾತು

ಇದೋ ನೆನಪಿರಲಿ ಈ ಕವಿತೆಯಲ್ಲಿನ ಕೊನೆಯ ಸಾಲು

ಯುಗಗಳಾಚೆಗೂ ಅಮರವೀ ಪ್ರೀತಿ ಇದಕುಂಟೇ ಸೋಲು..?

                   —ಸಚಿನ್ ಕುಮಾರ ಬಿ.ಹಿರೇಮಠ

ಅವಳೆಂದುಕೊಂಡು ನೀಡಿದ ಅಂತರಂಗದೊಳಗೆ….

ಹಗಲು ಮಲಗಿತೆಂದರೆ ಸಾಕು
ಮಬ್ಬಿದಿರಿಸಿನಲಿ ಕುಣಿಯತೊಡಗುತವೆ ಕನಸುಗಳು
ಯಾರ ಒತ್ತಾಯಕ್ಕೊ ಸಿಕ್ಕು
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..ಆಚಮನಕ್ಕೆ ತೆಗೆದಿರಿಸಿದ ಉದಕ
ಅಂಗೈಗೆ ಜಾರಿದೊದೆ ಆವಿಯಾದುದಕೆ ಆಶ್ಚರ್ಯವಿಲ್ಲ
ನಾನು ಮಾತ್ರ ಕಾಣಬಲ್ಲೆ ವಡಬಾನಲ
ಅವಳೆಂದು ಕೊಂಡು ನೀಡಿದ ಅಂತರಂಗದ ಒಳಗೆ..

ಬದುಕು ಹಸನಾಗುವ ಬಯಕೆಗಳೆಲ್ಲ
ಆಣೆಗಳೊಡಗೂಡಿ ಭರವಸೆಗಳ ಜೋಡಿ ಮೆರೆದಿದ್ದವು
ಇಂದಿಗೂ ಒಬ್ಬಂಟಿಯಾಗಿ ಚರಿಸುತಿವೆ
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..

ಸುಧೆ ಸೂಸುವ ಹೂದೋಟದಲಿ
ಹಾಲಾಹವನೆರೆದು ಹಣ್ಣು ನೀಡೆಂದು ಹೇಳಬಹುದೆ?
ಒಲವೆಲ್ಲ ಉಡುಗಿ ಹೋದ ಮೇಲೆ ಉಳಿಯಿತೇನು..?
ಅವಳೆಂದು ನೀಡಿದ ಅಂತರಂಗದ ಒಳಗೆ…
—-ಸಚಿನ್ ಕುಮಾರ ಬಿ.ಹಿರೇಮಠ