ನಮ್ಮ ಬಗೆಗಿನ ಮಾತು

sachin_b1985@yahoo.co.in
ನಮಸ್ಕಾರ,
ಇದು ನಮ್ಮ ಹೊಸ ಪ್ರಯತ್ನ.ಮಧುರ ಮನಸಿನ ಮಾಧುರ್ಯತೆಯನ್ನು ಸವಿಯಲು ಇದೊಂದು ಅಪ್ರತಿಮ ವೇದಿಕೆ.ಇದು ಹೃದಯ ಅರಳಿಸುವ ನವ ನವೀನ ಭಾವದ ಹೂವುಗಳನ್ನು ಪೋಣಿಸಿ ಮಾಲೆಯನ್ನಾಗಿಸಿ ಸಾಹಿತ್ಯದ ಚೌಕಟ್ಟಿಗೆ ಹಾಕುವ ಪ್ರಥಮ ಪ್ರಯತ್ನ.ಇಲ್ಲಿ ನೋವಿನಲ್ಲರಳಿದ,ನಲಿವಿನಲ್ಲರಳಿದ,ಒಮ್ಮೊಮ್ಮೆ ನಗೆ ತರಿಸುವ ಎಲ್ಲಾ ಬಗೆಯ ಸಂಗತಿಗಳಿವೆ.ಮಧುರ ಮನಸಿನ ಆಯಾಮವನ್ನು,ಸೂಕ್ಷ್ಮಗಳನ್ನು,ಬದುಕು ಕಲಿಸಿದ ಪಾಠಗಳನ್ನು,ಸ್ವಾನುಭವಿಸಿದ ಕ್ಷಣಗಳನ್ನು ಮೆರೆಸುವ ಒಂದು ಬಗೆಯ ಪ್ರಯತ್ನವಿದಾಗಿದೆ.ಪ್ರವೇಶವೇನೋ ನಮಗೆ ಹೊಸದೇ..ನಾವು ಎದವಿದಾಗ ಎಬ್ಬಿಸಿ,ಅತಿಯೆನಿಸಿದಾಗ ಮೊಟುಕಿ ನಮ್ಮನ್ನು ನಮ್ಮದೇ ಹಾದಿಗೆ ತರುವ ಮಹೋನ್ನತ ಮಾರ್ಗದರ್ಶನ ಮಾತ್ರ ಎಂದೆಂದೂ ನಿಮ್ಮದೇ..ಎಳೆಯರ ಬಳಗ ನಮ್ಮದು..ನಿಮ್ಮ ಆಶೀರ್ವಾದ ಕೋರಿ ನಿಂತಿರುವ ಇದು ಮಧುರ ಮನಸೇ..
ಧನ್ಯವಾದಗಳೊಂದಿಗೆ..
ಮಧುರ ಮನಸೇ…ಯ ಕೂಟ

ನಮ್ಮ ಬಳಗ:

ಸಚಿನ್ ಕುಮಾರ ಬಿ.ಹಿರೇಮಠ ಸಹ ಶಿಕ್ಷಕರು,

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಕೊಡಚಿ

ತಾ||ಜೇವರ್ಗಿ, ಜಿ|| ಗುಲ್ಬರ್ಗಾ

** ಪ್ರಶಾಂತ್ ಕುನ್ನೂರ್, ಸಹ ಶಿಕ್ಷಕರು,

** ನವೀನ್ ಕುಮಾರ ಬಿ.ಹಿರೇಮಠ,  ಬಿ.ಎ ದ್ವಿತೀಯ ವರ್ಷ

ಮುಧೋಳ, ಜಿ|| ಬಾಗಲಕೋಟ

3 Responses to this post.

  1. ಆಲ್ ದಿ ಬೆಸ್ಟರೇಪಾ…

    ತಮ್ಮ ಪ್ರಯತ್ನಕ್ಕೆ ಗೆಲುವು ಸಿಗಲಿ, ಮಕ್ಕಳಿಗೆ ನಿಮ್ಮ ಅನುಭವ ದಾರಿದೀಪವಾಗಲಿ

    -ಶೆಟ್ಟರು, ಮುಂಬಯಿ

  2. Posted by Kallare on December 17, 2008 at 12:11 pm

    ALL D BEST :)

  3. Posted by nvvikas on April 14, 2009 at 3:47 pm

    ನಿಮ್ಮ ಪ್ರಾಮಾಣಿಕ ಪ್ರಯನ್ಥ್ನ ಉತ್ತಮವಾಗಿದೆ. ಆದರೆ ಅನೇಕ ತಿಂಗಳುಗಳಿಂದ ಲೇಖನಗಳನ್ನು ಬರೆದಂತೆ ಕಾಣುತ್ತಿಲ್ಲ. ನಿಮ್ಮ ಲೇಖನಿಯನ್ನು ಕೇವಲ ಕವಿತೆಗಷ್ಟೇ ಸೀಮಿತಗೊಳಿಸಿಕೊಳ್ಳಬೇಡಿ.
    ಬರವಣಿಗೆಯಲ್ಲಿ ವೈವಿಧ್ಯತೆ ಇರಲಿ. ಬರೆಯುತ್ತಾ ಇರಿ.
    ಜಯವು ನಿಮ್ಮದಾಗಲಿ.
    ಶುಭಾಶಯಗಳು.

    ಶೇನಾಕು
    ಶೇ. ನಾ. ಕುಲಕರ್ಣಿ
    ಕೆ. ಜಿ. ಎಫ್.

Respond to this post

You must be logged in to post a comment.