ಪ್ರೀತ್ಸೋಕೆ ಏನು ಬೇಕು….?

ಪ್ರೀತಿಪ್ರೀತಿ.. ಈ ಎರಡಕ್ಷರ ಕಿವಿಗೆ ಬಿದ್ದಾಗ, ಕಣ್ಣಿಗೆ ಕಂಡಾಗ ಎದೆ ಝಲ್ಲೆನ್ನುತ್ತದೆ. ಪ್ರೀತಿಯ ಬಗ್ಗೆ ನಮ್ಮಲ್ಲಿ ಪದಗಳಿಂಗ ಭಾವನೆಗಳೇ ಜಾಸ್ತಿ.
ನಮ್ಮ ಅರಿವಿನಂತರಾಳಕ್ಕೆ ಪ್ರೀತಿ ಅನುರಣಿಸುವುದು ಒಂದು ಕ್ರಮಬದ್ಧವಾದ ವಯಸ್ಸಿನಲ್ಲೇ. ಸ್ಕೂಲುಗಳಲ್ಲಿ, ನಮ್ಮ ನಮ್ಮ ಮನೆಗಳಲ್ಲಿ ನಮ್ಮವರು ಎನಿಸಿಕೊಂಡವರು ನಮ್ಮನ್ನು ಪ್ರೀತಿಸಿರುತ್ತಾರೆ. ಆದರೆ ಅದು ಅಪ್ರಕ್ಷುಬ್ಧ ಪ್ರೀತಿ. ಅದು ಒಂದು ಅನಿವಾರ್ಯತೆಗೆ ಒಳಪಟ್ಟು ಸಂಬಂಧಗಳಲ್ಲಿ ನುಸುಳಿ ಗಟ್ಟಿಗೊಳ್ಳಲು ಪ್ರಯತ್ನಿಸಿ, ಕೊನೆಗೆ ಗಟ್ಟಿಗೊಂಡಿರುತ್ತದೆ. ಅಲ್ಲಿ ಮೊದಲು ಸಂಬಂಧಗಳು ಬೇರೂರಿ ಬಳಿಕ ಕ್ರಮೇಣ ಪ್ರೀತಿಯ ಹೂವರಳಿಸಲಾರಂಭಿಸುತ್ತದೆ. ಅಲ್ಲಿ ಪ್ರೀತಿ ಅನ್ನೋದು ‘ಮಾಡಲೇಬೇಕಾದ’ ಅನಿವಾರ್ಯತೆ. ಈ ಅನಿವಾರ್ಯತೆ ಕೆಲವೊಮ್ಮೆ optional ಅಂತನ್ನಿಸಿದರೆ ಅಲ್ಲಿನ ಸಂಬಂಧಗಳು ಬಿರುಕು ಬಿಡಲಾರಂಭಿಸುತ್ತವೆ. So ಈ ಪ್ರೀತಿ ನಮಗೆ ಕೆಲವೊಮ್ಮೆ ಹೊಸತು ಎನ್ನಿಸುತ್ತಾದರೂ ಅದು ಅತೀ ಮುಖ್ಯವಾದುದು ಎಂಬುದು ಮಾತ್ರ ನಿಜ. ಈಗ ನಾನು ಹೇಳ ಹೊರಟಿರುವುದು ಈ ತರಹದ ಪ್ರೀತಿಯ ಬಗ್ಗೆ ಅಲ್ಲ. ಹೃದಯವನ್ನು ಹೂವಾಗಿಸುವ, ಹದಿವಯಸುಗಳ ಮನಸ್ಸನ್ನು ಹೊಕ್ಕು ಕಚಗುಳಿಯಿಡುವ, ಮೈ ನವಿರೇಳಿಸುವ ಮದುರ ಅನುಭೂತಿ ನೀಡುವಂಥ ಪ್ರೀತಿ ಬಗ್ಗೆ.
‘ಪ್ರೀತ್ಸೋಕೆ ಏನುಬೇಕು’ ಅಂತ ಮೊನ್ನೆ ಗೆಳೆಯನೊಬ್ಬ ಕೇಳಿದ. ಏನೊಂದು ತೋಚದೇ ಮೊಬೈಲನ್ನು ಆಚೆಗಿಟ್ಟು ಕುಳಿತುಬಿಟ್ಟೆ. ಮನಸ್ಸು ಒಂಟಿಯಾಗುವುದನ್ನೇ ಕಾಯುತ್ತಿದ್ದ ಈ ಪ್ರಶ್ನೆ ಮತ್ತೇ ಕಾಡತೊಡಗಿತು. ಪ್ರೀತ್ಸೋಕೆ ನಿಜವಾಗಲೂ ಏನು ಬೇಕು?
ಮನಸ್ಸಾ..? ಮೂಡಾ..? ಪ್ರತಿಷ್ಟೆನಾ…? ಅಥವಾ ಸ್ಟೈಲಾ…? ಹೀಗೆ ನೂರಾರು ರಿತಿಯಲ್ಲಿ ಉತ್ತರಗಳು ಸೇರಿ ನಿಖರವಾದ ಪ್ರಶ್ನೆಯನ್ನು ಮರೆಮಾಚಲು ಯತ್ನಿಸಿದವು. ಅದಕ್ಕೂ ಮೊದಲು ಪ್ರೀತ್ಸೋದು ಅಂದರೇನು? ಒಬ್ಬ ವ್ಯಕ್ತಿಯನ್ನು ಇಷ್ಟ ಪಡುವುದಾ? ಅಥವಾ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಇಷ್ಟಪಡುವುದಾ? ಆರಾಧಿಸುವುದಾ? ಕಾಳಜಿ ನಿಗಾ ವಹಿಸುವುದಾ? ಏನೊಂದು ತಿಳಿಯಲಿಲ್ಲ..
ಪ್ರೀತಿ ಮಧುರವಾದ ಅನುಭೂತಿ. ಅದು ಖಾಸಾ ಮನಸಿಗೆ ಸಂಬಂಧಿಸಿದ್ದು. So ಪ್ರೀತಿಗೆ ಮುಖ್ಯವಾಗಿ ಮನಸು ಬೇಕು.. ಪ್ರೀತ್ಸೋಕೆ ಏನೆಲ್ಲಾ ಬೇಕು ಅಂತ ನನ್ನ ಗೆಳೆಯರು, ಗೆಳತಿಯರು ಚಿಕ್ಕಪ್ಪ, ಚಿಕ್ಕಮ್ಮ, ಅಪ್ಪ, ಅಮ್ಮ ಹೀಗೆ ಎಲ್ಲರೂ ನೂರಾರು ರೀತಿಯಲ್ಲಿ ಏನೇನೋ ಉತ್ತರಗಳನ್ನು ಕೊಟ್ಟರೂ ಮನಸ್ಸು ಯಾಕೋ ಅವನ್ನೆಲ್ಲ ಒಪ್ಪಲಿಲ್ಲ..ಅಸಲಿಗೆ ಪ್ರೀತ್ಸೋಕೆ ಏನು ಬೇಕು..?

ಪ್ರೀತಿಯಲ್ಲಿ ಬಿದ್ದ ಅನುಭವ ನನಗಿಲ್ಲವಾದರೂ ಪ್ರೀತ್ಸೋಕೆ ಏನು ಬೇಕೆ ಎಂಬುದನ್ನು ಊಹಿಸಬಹುದಷ್ಟೇ.. ಪ್ರೀತಿಗೆ ಪ್ರೀತಿಸೋ ಮನಸು ಬೇಕು.ಅವಳೊಬ್ಬಳು ಇಷ್ಟವಾದರೆ ಸಾಕಾಗುವುದಿಲ್ಲ.. ಅವಳ ಬೇಕು ಬೇಡಗಳು, ಹಾಲಿನಂಥ ಮನಸ್ಸು, ಅವಳ ಆಸೆ ಆಕಾಂಕ್ಷೆಗಳು, ಅವಳು ಬದುಕನ್ನು ಇಷ್ಟ ಪಡುವ ರೀತಿ, ಅವಳ ಭವಿಷ್ಯದ ಕನಸುಗಳು ಹೀಗೆ ಸಂಪೂರ್ಣವಾಗಿ ಅವಳನ್ನು ಅರ್ಥ ಮಾಡಿಕೊಳ್ಳಲು ಇರುವ ಸಹನೆ ಬೇಕು.ಅವಳು ನಮ್ಮೊಂದಿಗೆ ಇರಬಯಸುವ ಬದುಕಿನ ಪೂರ್ವಾವಲೋಕನ ಇವೆಲ್ಲ ನಮಗಿರಬೇಕು.ಯಾರಾದರೂ ನನ್ನನ್ನು ‘ಲೋ ಯಾರನ್ನಾದ್ರೂ ಪ್ರೀತಿಸ್ತಿದ್ದೀಯೇನೋ?’ ಅಂತಾ ಕೇಳಿದಾಗ ನನ್ನಲ್ಲಿ ಸಹಜವಾಗಿ ಉದ್ಭವಿಸುವ ಪ್ರಶ್ನೆಗಳೆಂದರೆ ಇವೆ. ಈ ಮೇಳೆ ಹೇಳಿದ ಅಂಶಗಳೆಲ್ಲ ನಮ್ಮ ಮನಸ್ಸಿನೊಡನೆ sink ಆಗುತ್ತವಾ? ಎಂಬುದು..

ನನಗೆ ಮೊದಲ ಬಾರಿ ಹುಡುಗಿಯೊಬ್ಬಳು ‘ನಿನ್ನನ್ನು ಪ್ರೀತಿಸ್ತಾ ಇದ್ದೀನಿ ಕಣೋ’ ಎಂದಾಗ ಆಶ್ಚರ್ಯದೊಂದಿಗೆ ನಗುವೂ ಬಂದಿತ್ತು. ಆ ಹುಡುಗಿ ನನ್ನನ್ನು ಪ್ರೀತಿಸಲು ಇಟ್ಟುಕೊಂಡ ಮಾನದಂಡಗಳೇನು ಗೊತ್ತಾ? ಮನಸ್ಸು, ಸರಳತೆ, ಚಂದ ! ಆ ವಯಸ್ಸೆ ಹಾಗೆ ಬಿಡಿ. ಹುಡುಗರಿಗೆ ಸಂಬಂಧಿಸಿದಂತೆ ಹೇಳುವುದಾದರೆ ಹುಡುಗಿಯರನ್ನು ಮೆಚ್ಚಿಸಿ ಪ್ರೀತಿ ಮಾಡುವುದು ದೊಡ್ಡದಲ್ಲ.. ಬದುಕು ಮುಗಿಯುವವರೆಗೂ ಆ ಪ್ರೀತಿ ಕಿಂಚಿತ್ತೂ ಕಡಮೆಯಾಗದಂತೆ ನೋಡಿಕೊಳ್ಳುವುದು.ಹಾಗಾಗಿ ಪ್ರೀತಿಸೋಕೆ ಮುಂಚೆ ನಮ್ಮ ಸಂಗಾತಿ ನಮ್ಮೊಂದಿಗೆ ಎಷ್ಟು ಚೆನ್ನಾಗಿ ಇರಬಲ್ಲಳು?ತನ್ನ ಕನಸುಗಳನ್ನೆಲ್ಲ ನಮ್ಮ ಕನಸುಗಳಂತೆ ಕಂಡು ನಸಾಗಿಸುವಲ್ಲಿ ಎಷ್ಟರ ಮಟ್ಟಿಗೆ ಪ್ರಾಮಾಣಿಕತೆ ತೋರಬಲ್ಲಳು? ನಾವು ಅವಳ ಭಾವನೆಗಳಿಗೆ ಹೇಗೆ ಸ್ಪಂದಿಸುಬಲ್ಲೇವು ಎಂಬುದನ್ನೆಲ್ಲ ಗಮನದಲ್ಲಿರಿಸಿ ಪ್ರೀತಿಸಬೇಕು. ಪ್ರೀತಿ ಮಾಡೋದಲ್ಲ..ಹುಟ್ಟೋದು ಅಂತ ಯಾರೋ ಅನ್ನಬಹುದು..ಮಗು ಕೂಡ ಹುಟ್ಟುತ್ತೆ..ಆದರೆ ಅದನ್ನು ಹುಟ್ಟಿಸುವವರು ಅದರ ತಂದೆ ತಾಯಿಗಳು..ಹಾಗೆ ಪ್ರೀತಿ ಹುಟ್ಟುತ್ತೆ..ಹುಟ್ಟಲು ಸರಿಯಾದ ವಿಧಾನ ಬೇಕಷ್ಟೇ.. ಹಾಗಾಗಿ ಪ್ರೀತಸೋಕೆ ಸಹನೆ,ಭಾವನೆಗಳು, ಮನಸ್ಸು, ಹಪಹಪಿತನ, ಸಮರ್ಪಣಾ ಭಾವ ಜೊತೆಗೆ ಒಂದಿಷ್ಡು ಕಷ್ಟಗಳನ್ನು ಸಹಿಸಿಕೊಳ್ಳೋ ಶಕ್ತಿಯು ಬೇಕು ಎನ್ನುವುದು ನನ್ನ ಅಭಿಪ್ರಾಯ. ನೀವೇನಂತಿರಾ…?

—ಸಚಿನ್ ಕುಮಾರ ಬಿ.ಹಿರೇಮಠ

ಬದುಕ ದಾರಿಯಲಿ ಕಳೆದು ಹೋದವಳೇ….

ವಳು ಈಗಲೂ ನೆನಪಾಗುತ್ತಿದ್ದಾಳೆ. ಸ್ನಿಗ್ಧ ಸೌಂದರ್ಯ, ಏನ್ನನೋ ಹೇಳ ಬಯಸುವ ಕಂಗಳು, ಇರುಳನ್ನೇ ನಾಚಿಸುವಂಥ ಮುಂಗುರುಳು, ಚೆಂದುಟಿಯ ಮೇಲೆ ನಳನಳಿಸುವ ಹೂ ನಗೆ, ನಿತಂಬದವರೆಗಿನ ಜಡೆ – ಎಲ್ಲವೂ ಮನಸ್ಸನ್ನು ಕಲಕಿ ಮಧುರ ಭಾವದಲೆಗಳ್ನು ಎಬ್ಬಿಸಿತ್ತು. ಅವಳು ಯಾಕಾದರೂ ನನಗೆ ಪರಿಚಯವಾದಳೋ…?ಅವಳಿಲ್ಲದ ಈ ಕ್ಷಣಗಳನ್ನು ಯಾಂತ್ರಿಕವಾಗಿ ಕಳೆಯುತ್ತ ಹೋದಲ್ಲಿ ಬದುಕಿಗಿರುವ ಮಹತ್ವವಾದರೂ ಏನು..? ಅವಳು ಮತ್ತೇ ನನನ್ ಹೃದಯಂತರಾಳದೊಳಕ್ಕೆ ಬಂದು ಸೇರುತ್ತಾಳೋ, ಬದುಕಿನ ನೀರವತೆಯನ್ನು ಕಳೆದು ಕಲರವವಾಗುತ್ತಾಳೋ ಒಂದು ಗೊತ್ತಿಲ್ಲ..

ನಮ್ಮ ನಮ್ಮ ನಡುವೆ ಹುಟ್ಟಿಕೊಂಡ ಸ್ನೇಹಲತೆಗೆ ನೀರೆರೆದಿದ್ದೆ ಈ ನನ್ನ ವೃತ್ತಿ. ವೃತ್ತಿಯನ್ನು ಪ್ರೀತಿಸಿಕೊಂಡಷ್ಟೆ ಅವಳ ಈ ಸ್ನೇಹವನ್ನು ಪ್ರೀತಿಸಿಕೊಂಡೆ. ಅವಳು ಬದುಕಿನುದ್ದಕ್ಕೂ ಕಾಣುತ್ತಿದ್ದ ಕನಸುಗಳು, ನನ್ನ ಭವಿಷ್ಯವ್ನನು ನನಗೆ ಚಿತ್ರಿಸಿಕೊಡುತ್ತಿದ್ದ ಬಗೆ, ಅವಳ ಆ ಒಂದು ಮನೋ ಇಂಗಿತ ಎಲ್ಲವನ್ನು ಅರಿತುಕೊಂಡೆ.ಅವಳ ಸ್ನೇಹದ ಸೋನೆ ಮಳೆಯಲ್ಲಿ ನನ್ನ ನೋವು ದುಗುಡಗಳೆಲ್ಲ ತುಸು ಕರಗಿ ಹೋದವೆನ್ನಿ. ಅವಳ ನಗುವಿನಾಳದಲ್ಲಿ ಪುಟಿದೆದ್ದು ಖುಷಿಯ ಸಂಗತಿಗಳನ್ನು ನಾನು ಲೆಖ್ಖವಿಟ್ಟಿಲ್ಲ. ಅವಳಾಡುತ್ತಿದ್ದ ಮಾತುಗಳಿಲ್ಲ.. ಹಾಡಿದ ಹಾಡುಗಳು, ಅದೆಷ್ಟೋ ಮನಸುಗಳಿಗೆ ಜೀವ ಲಾಲಿಯಂತೆ.. ನಿನ್ನ ಸಾಂಗತ್ಯ, ಾಮೀಪ್ಯ ಬದುಕಿನ ಮಹೋನ್ನತ ಸುಖಗಳಲ್ಲೊಂದು.

ಆದರೆ ನೀನು ಹೇಳ ಹೆಸರಿಲ್ಲದಂತೆ ದೂರವಾದದ್ದೇಕೆ..?ಬದುಕಿನ ಮುಗಿಲಲಿ ಮಿಂಚಿ ಮಾಯವಾದ ಮಿಂಚಂತೆ.. ಸ್ನೇಹವೆಂಬ ಸೆಲೆತಕ್ಕೆ ಸಿಲುಕಿ ದೂರವಾದ ಕಾರಣ ಹುಡುಕುತ್ತ ನಿನ್ನ ನೆನಪುಗಳಲ್ಲೆ ಕಾಲ ಕಳೆಯುತ್ತಿದ್ದೇನೆ. ಯಾಕೆ ಗೆಳತಿ..?ನನ್ನಿಂದೆನಾದರು ತಪ್ಪಾಯಿತಾ? ಅಸಲಿಗೆ ನಿನ್ನ ಸ್ನೇಹವೊಂದನ್ನು ಹೊರತುಪಡಿಸಿ ನಾನು ನಿನ್ನಿಂದೇನು ಬಯಸಿಲ್ಲ..ನಿನ್ನ ಖಾಸಗಿ ಜೀವನದೊಳಕ್ಕೆ ಎಂದೂ ತಲೆ ಹಾಕಿದವನಲ್ಲ..

ಪ್ರೀತಿ ಪ್ರೇಮ ಎಂದು ನಿನ್ನ ಹಿಂದೆ ಬಿದ್ದವನಲ್ಲ.. ನಾನೊಬ್ಬ ಸ್ನೇಹ ಭಿಕ್ಷಾರ್ಥಿಯಷ್ಟೇ.! ನೀನು ಕಲಿಸಿದ ಪಾಠಗಳಿಂದ, ನೀತಿಗಳಿಂದ, ರೀತಿಗಳಿಂದ ಅದೆಷ್ಟೋ ತೆರದಲ್ಲಿ ಬದಲಾಗಿದ್ದೇನೆ. ನನ್ನನ್ನು ನಾನು ತಿದ್ದುಕೊಂಡಿದ್ದೇನೆ.ನೋವುಗಳೆನ್ನೆಲ್ಲ ಹಿಂಡಿ ನಲಿವಿನ ಸಿಹಿ ಕಂಡಿದ್ದೇನೆ.ಸದಾ ಸಪ್ತ ಸ್ವರಗಳಂತೆ ನಿನ್ನ ಸವಿಮಾತುಗಲ ಸಿಂಚನವಿಲ್ಲದೆ ಮನದ ಮಂದಾರ ಬಾಡಿ ಹೋಗಿದೆ. ನಿನ್ನ ನಗುವ ಚಂದಿರನಿಲ್ಲದೆ ಎದೆಯ ಬಾನು ಕತ್ತಲಾಗಿದೆ. ಹೃದಯ ಬೆತ್ತಲಾಗಿದೆ. ಎದೆಯೊಳಗೆ ನಾಯಿಕೊಡೆಗಳಂತೆ ನಿನ್ನ ಬಗೆಗಿನ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಮನಸ್ಸಿನ ಬಯಲಿನ ತುಂಬಾ ಒಂದೆ ಒಂದು ರಿಂಗಣ..’ಅವಳ್ಯಾಕೆ ನನ್ನಿಂದ ದೂರವಾದಳು..?’ ಕಾರಣ ಇನ್ನೂ ಹುಡುಕುತ್ತಲೇ ಇದ್ದೇನೆ…

—ಸಚಿನ್ ಕುಮಾರ ಬಿ.ಹಿರೇಮಠ

ಚಿಮ್ಮು ಅರಿವಿನ ನಭಕೆ…

ತೆವಳದಿರು ಓ ಹೆಣ್ಣೆ..!
ನಿನ್ನ ನೀ ಅರಿಯದಲೇ
ಸೆರದಿರು ಮತ್ತದೇ…
ಅಂಧಕಾರ ಚಿಪ್ಪಿನಲೇ…

ಏನು ಸುಖ ಮೃದತನದಿ?
ನಿನ್ನ ಮೆಟ್ಟಿ ನಿಲುವವರೆ
ತಾನೂ ಸಖನೆಂದೆನಿಸಿ
ಮೈ ಮನ ಕೊಲುವವರೆ..

ನಿನ್ನ ಹೋಲಿಸುವರು ಇಳೆಗೆ
ಮೃದು, ಗಟ್ಟಿ ಎರಡೂ ನಿನ್ನಲೇ…
ಹಲವು ಮುಖ ಹಲವು ಬಗೆ
ಪರಮ ಸುಖ ಒಳಗೊಳಗೆ….

ತೆವಳುವಿಕೆಯ ನೀ ತೊರೆದು
ಶಾಂತಿ ದೂತನ ಹಾಗೆ
ಚಿಮ್ಮು ಅರಿವಿನ ನಭಕೆ…
ಕಾಲ ಕಾಲವಾಗುವವರೆಗೆ..

—ಸಚಿನ್ ಕುಮಾರ ಬಿ.ಹಿರೇಮಠ

ಕನಸುಗಳು….

www.madhuramanase.wordpress.com
ಸಾಲುಗಟ್ಟಿ ಕುಳಿತಿವೆ ಕನಸುಗಳು
ಮನದ ಬಾಲ್ಕನಿಯಲ್ಲಿ..
ನನಸಾಗಿ ಹಾರುವ ಹಸಿ ನಿರೀಕ್ಷೆಯಲ್ಲಿ
ಇರುಳಿನ ತುಂಬ ಇಣುಕುತ್ತಿವೆ…

ಬುದ್ಧ, ಬಸವ, ಗಾಂಧೀ, ನೆಹರು
ಹೀಗೆ ನುಸುಳುತ್ತಿವೆ ನೂರಾರು..
ಚುಕ್ಕಿ ಚಂದ್ರಮರೆತ್ತರಕೆ ಚಿಮ್ಮಿದರೂ
ಬಲುಗಟ್ಟಿ ಹೃದಯಂತರಾಳದ ಬೇರು…

ಹಸಿದವರ ಬವಣೆ ನೀಗಿಸೋ ಕನಸು..
ಜಗದಳುವ ನೀಗಿ ನಗಿಸೋ ಕನಸು..
ಇಂಥ ಸ್ವಚ್ಛಂದಮಯ ಕನಸುಗಳಿಗೆ
ಹಾತೊರೆಯುತ್ತಿದೆ ಎನ್ನ ಮನಸು….

—-ಸಚಿನ್ ಕುಮಾರ ಬಿ.ಹಿರೇಮಠ

ಗಣೇಶ ಬಂದ..

ಗಣೇಶಮತ್ತೊಮ್ಮೆ ಗಣೇಶ ಬರುತ್ತಿದ್ದಾನೆ. ಮಳೆಯಿಲ್ಲದೆ ಪತರಗುಟ್ಟುತ್ತಿರುವ ರೈತಾಪಿ ಜನ ತುಸು ಸಾವರಿಸಿಕೊಂಡಿದ್ದಾರೆ. ಕಳೆದೆರೆಡು ವಾರಗಳಿಂದ ಸುರಿದ ಮಳೆಗೆ ಹೃನ್ಮನಗಳು ನಲಿದಿವೆ. ಕೈ ಮೀರಿ ಹೋಗುತ್ತಿದ್ದ ಬೆಳೆಗಳಿಗೆ ನವ ಜೀವ ಕಳೆ ಬಂದಿದೆ. ಮುಗಿಲಿನ ೊಡಲಿನ ಭ್ರೂಣಗಳ ತೇಲುವಿಕೆ ಶುರುವಾಗಿದೆ. ಮುಂಗಾರು ಮಳೆಯ ಲೀಲೆ ಇನಿತು ಇನಿತಾಗಿ ಶುರುವಾಗಿದೆ. ವಿದ್ಯುದಭಾವದ ಸಮಸ್ಯೆ ತುಸು ನಿರಾಳವಾಗಿದೆ. ಸರ್ಕಾರದ ಹುಸಿ ಭರವಸೆಗಳು ಇನ್ನೂ ಭರವಸೆಗಳಾಗಿಯೆ ಉಳಿದಿವೆ. ಈ ನಡುವೆ ಚುನಾವಣೆ ಮತ್ತೊಮ್ಮೆ ಇಣುಕಿ ನಿಚ್ಚಳವಾಗಿದೆ. ದೇಶದ ಭದ್ರತೆಗೆ ದಕ್ಕೆ ಬರುವಂತ ಸೂಚನೆಗಳ ನಡುವೆಯೂ ದೇಶದ ಜನತೆ ನಿರುಮ್ಮಳವಾಗಿದೆ. ಎಲ್ಲಿಂದಲೋ ಇಲ್ಲಿಗೆ ವಕ್ಕರಿಸಿಕೊಂಡ ‘ಹಂದಿ ಜ್ವರ’ ತುಸು ಆತಂಕವನ್ನು ಸೃಷ್ಟಿಸಿದೆ. ಒಂದು ದೇಶದ ಭದ್ರತೆ ಆ ದೇಶದ ಆರೋಗ್ಯ ಸಮಪನ್ಮೂಲದ ಮೇಲೆ ನಿರ್ಭರವಾಗಿದೆ. ಅದಕ್ಕೆಂದೇ ನಾನಾ ಕಡೆ H1N1 ದ ಲಕ್ಷಣಗಳು , ಮುನ್ನೆಚ್ಚರಿಕೆಯ ಕ್ರಮಗಳು, ಚಿಕಿತ್ಸಾ ವಿಧಾನಗಳ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇಷ್ಟೆಲ್ಲ ಗೀಳು ಗೋಳಗಳ ಮಧ್ಯೆ ಗಣೇಶ ಮತ್ತೇ ಬರುತ್ತಿದ್ದಾನೆ.

ಪ್ರತಿ ಸಲ ಗಣೇಶ ಬರುವಾಗ ಎಲ್ಲಿಲ್ಲದ ಸಂಭ್ರಮ ನಮ್ಮ ದೇಶದ ಜನತೆಯಲ್ಲಿ.. ಆದರೆ ಈ ಸಲ ನಾನಾ ಸಂಕಷ್ಟಗಳೊಂದಿಗೆ ವಿಘ್ನ ನಿವಾರಕ ಆಗಮಿಸುತ್ತಿದ್ದಾನೆ. ಆದರೆ ಈಗ ೊದಗಿರುವ ವಿಘ್ನಗಳಿಗೆ ಗಣೇಶನಾಗಲೀ, ಅಥವಾ ಯಾವ ದೇವರಾಗಲೀ ಕಾರಣರಲ್ಲ.. ಪರಿಸರದ ಬಗ್ಗೆ ನಮ್ಮ ನಿಷ್ಕಾಳಜಿ, ಮಾಲಿನ್ಯ, ಅವೈಜ್ಞಾನಿಕ ಚಟುವಟಿಕೆಗಳೇ ಬಲವಾದ ಕಾರಣ..So ಏನೇ ಆಗಲಿ, ನಮ್ಮ ಗಣೇಶನನ್ನು ಪ್ರೀತಿಯಿಂದ, ಭಕ್ತಿಯಿಂದ ಬರ ಮಾಡಿಕೊಳ್ಳೋಣ. ಬರೀ ಪೂಜೆ, ಪುನಸ್ಕಾರ ಸಲ್ಲಿಸಿದರೆ ನಮ್ಮ ವಿಘ್ನಗಳು ನಿವಾರಣೆಯಾಗುವುದಿಲ್ಲ.. ಪರಿಸರದ ಬಗ್ಗೆ ನಮ್ಮಲ್ಲಿ ಕಾಳಜಿಯ ಕಣ್ಣು ತೆರೆದುಕೊಳ್ಳಬೇಕು..ಆಗಲೇ ಅದು ನಿಜವಾದ ಪೂಜೆ ಎನಿಸಿಕೊಳ್ಳುತ್ತದೆ..
ನೀವೇನಂತಿರಾ…?

—ಸಚಿನ್ ಕುಮಾರ ಬಿ.ಹಿರೇಮಠ

ಅಂಬಾರಿ ; ಪ್ರೀತಿಯ ಜೊತೆಯಲ್ಲಿ…

ಅಂಬಾರಿ ..ಪ್ರೀತಿಯ ಜೊತೆಯಲ್ಲಿ.. ಒಂದು ಪರಿಪೂರ್ಣವಾದ ಚಲನಚಿತ್ರ ಻ನ್ನುವುದಕ್ಕಿಂತ ೊಂದು ಮನೋಚಾಲಿತ ಲಹರಿ. ಆತ ೊಬ್ಬ ಚಪ್ಪಲಿ ಹೊಲಿಯುವವ, ಸಾಮಾಜಿಕ ವರ್ಗದಲ್ಲಿ ಅತೀ ಕೆಳ ಮಟ್ಟದಲ್ಲಿರುವವನೆಂದು ತನ್ನ ಪರಿಧಿಯೊಳಗೆ ಬದುಕುವ ಹುಡುಗ. ಕುಟುಂಬದ ೊಂದೇ ಕುರುಹು ೆಂಬಂತೆ ಅಪ್ಪನ ಮೇಲೆ ವಿಪರೀತ ಪ್ರೀತಿ. ಕಾಳಜಿ. ಚಿತ್ರದ ಾರಂಭದಲ್ಲಿ ತನ್ನ ಕುಡುಕ ತಂದೆಯ ವಿಲಕ್ಷನ ವರ್ತನೆಯಿಂದ ರೌಡಿಯೊಂದಿಗೆ ವೈರತ್ವ ಬೆಳೆಸಿಕೊಳ್ಳುತ್ತಾನೆ. ಮಳೆ ಬರೀ ನೀರನ್ನು ಮಾತ್ರ ತರುವುದಿಲ್ಲ. ಬದಲಿಗೆಭೂಮಿಯಲ್ಲಿ ಕನ್ಯತ್ವವನ್ನುಂಟು ಮಾಡುತ್ತದೆ. ಜೀವ ತುಂಬುತ್ತದೆ. ಪ್ರೀತಿ ತರುತ್ತದೆ. ಅಂತಹ ಹನಿಮಳೆಯಲ್ಲಿ ಮುದ್ಉ ನಾಯಿಮರಿನ್ನೆತ್ತಿಕೊಂಡು ನಾಯಕನ ಅಂಗಡಿಯತ್ತ ಬರುತ್ತಾಳೆ ನಾಯಕಿ. ಇವನ ದೃಷ್ಟಿ ಸಹಜವಾಗಿ ಅವಳ ಚಪ್ಪಲಿಯತ್ತ ಹೋಗುತ್ತದೆ. ಕೂಡಲೆ ಇವನ ಹೃದಯ ಻ವಳ ಾ ಹೆಜ್ಜೆಗಳಿಗನುಸಾರವಾಗಿ ಮಿಡಿಯಲಾರಂಭಿಸುತ್ತದೆ. ಅವಳ ನೆನೆಯುವಿಕೆಗೆ ಇವನು ಅಡ್ಡಿಯಾಗುತ್ತಾನೆ. ಇವನ ಒಳ್ಳೆಯತನಕ್ಕೆ ಅವಳು ಎಡೆಯಾಗುತ್ತಾಲೆ. ವಿಕಲ ಚೇತನರಿಗೆ, ವಯಸ್ಸಾದವರಿಗೆ ನಾಯಕ ಮಾಡುವ ಸಹಾಯಗಳೆಲ್ಲ ಿವಳ ಪ್ರೀತಿಗೆ ಕನಸುಗಳಾಗುತ್ತವೆ. ಇವಳಿಗೆ ಅವನಲ್ಲಿ ಲವ್ವಾಗುತ್ತದೆ. ಆದರೆ ಪ್ರೇಮ ನಿವೇದನೆಯನ್ನು ಮಾತ್ರ ನಾಯಕಿಯೆ ಆರಂಭಿಸುತಾಳೆ. ಸಮಾಜವನ್ನು ಚೆನ್ನಾಗಿ ಬಲ್ಲ ನಾಯಕ ಿವಳ ಪ್ರೀತಿಯನ್ನು ಮೊದಮೊದಲು ಧಿಕ್ಕರಿಸುತ್ತಾನೆ. ಆದರೆ……
(ಮುಂದುವರೆಯುವುದು….)
—- ಸಚಿನ್ ಕುಮಾರ ಬಿ.ಹಿರೇಮಠ

ಶಕ್ತ…

ನೀನಾಗಲಿ, ನಿನ್ನ ನೆನಪುಗಳಾಗಲಿ
ಬರಕೂಡದೆಂದು ನನ್ನೆದೆಗೆ
ಬೀಗ ಜಡೆದುಕೊಂಡು
ಕೀಲಿ ಕೈ ಕಳೆದುಕೊಂಡೆ
ಸಂಬಂಧಗಳನ್ನೆಲ್ಲಾ ತೊಳೆದುಕೊಂಡೆ

ಮನಸಿನೊಳಗೆ ನಿನ್ನ
ಕನಸುಗಳು ತೂರದಂತೆ
ಬೇಲಿ ಹಾಕಿಕೊಂಡೆ
ಕಣ್ಣು ರೆಪ್ಪೆಗಳನ್ನು ಹಿಂಡಿ
ನಿನ್ನ ಜಾರಿಕೊಂಡೆ

ಇವೆಲ್ಲವನ್ನು ಮೀರಿ ನೀ
ನನ್ನೊಳ ಬಂದೆ
ಹೇಗೆ ಸಾದ್ಯ ಎಂದಾಗ
ಪ್ರೀತಿ ಎಂದೆ

ಪ್ರೀತಿ ಇಷ್ಟು ಶಕ್ತವೇ…?

ಸಚಿನ್ ಕುಮಾರ ಬಿ.ಹಿರೇಮಠ

ತಂಪು ಬಿಸಿಲು

ಈಗ ನಾನು ನಿರೂಪಿಸುತ್ತಿರುವ ಘಟನೆ ಇಷ್ಟೊಂದು ರೋಚಕ ತಿರುವುಗಳನ್ನು ಪಡೆಯುತ್ತದೆಯೆಂದು ನಾವು ನಿರೀಕ್ಷಿಸಿರಲಿಲ್ಲ. ಹುಡುಗಿಯರ ನಾಡಿ ಮಿಡಿತವನ್ನು ಅಚ್ಚುಕಟ್ಟಾಗಿ ಲೆಕ್ಕ ಹಾಕುವ ನಮ್ಮೆಲ್ಲರಿಗೂ ಇದು ಊಹಿಸದ ಘಟನೆಯಾಗಿತ್ತು. ಅವಳು ಅಷ್ಟೊಂದು ಸಲಿಗೆಯಿಂದ ವರ್ತಿಸುತ್ತಾಳೆಂದು ನಮ್ಮ ಸ್ನೇಹ ಬಯಸುತ್ತಾಳೆಂದು ಕೊನೆಗೆ ನಾವೆಲ್ಲರೂ ಅವಳನ್ನು ತುಂಬಾ ಮಿಸ್ ಮಾಡಿಕೊಲ್ಳುವ ಻ನುಭವ ಪಡೆಯುತ್ತೇವೆಂದು ಮೊದಲೇ ಎಣಿಸಲು ಸಾಧ್ಯವಾಗಿರಲಿಲ್ಲ. ವಿಷಯವಿಷ್ಟೇ.. ಅಪರಿಚಿತಳಂತೆ ಕಂಡುಬಂದರೂ ತುಂಬಾ ಆತ್ಮೀಯವಾಗಿ ಬಾಂಧವ್ಯದ ಬಲೆ ಬೀಸಿ ು ದೂರವಾನಿ ಸಂಕ್ಯೆಯನ್ನೂ ಪಡೆಯಲಾಗದೆ ಮಾಯವಾದ ರಮ್ಯ ಸೌಂದರ್ಯದ ಸುಂದರಿಯ ಸಂಧಿಸಿದ ಘಟನೆಯಿದು. ಅದು ತುಂಬಾ ಅನಿರೀಕ್ಷಿತ. ನಾನು ಮತ್ತು ನನ್ನ ಇನ್ನಿಬ್ಬರ ಸ್ನೇಹಿತರು ನಮ್ಮ ಮತ್ತೊಬ್ಬ ಸ್ನೇಹಿತನ ವಿವಾಹಕ್ಕೆ ಹೊರಟಿದ್ದೆವು. ಬೇಸಿಗೆಯ ಧಗೆ ಮರೆಸುವ ಸ್ನಿಗ್ಧ ಸೌಂದರ್ಯವುಳ್ಳ ಸುಮಾರು ಇಪ್ಪತ್ತರ ಆಸುಪಾಸಿನ ಹುಡುಗಿಯೊಬ್ಬಳು ಬಸ್ಸನ್ನೇರಿದಳು. ಅವಳು ಕುಳಿತಿದ್ದೂ ನಮ್ಮ ಸೀಟಿನ ಪಕ್ಕದಲ್ಲೆ. ಮೊದಮೊದಲು ತುಂಬಾ ಗಾಂಭೀರ್ಯವನ್ನು ಮೆರೆದರೂ ಸ್ವಲ್ಪ ಹೊತ್ತಿನ ನಂತರ ಮೈನ ಮುರಿದು ಪಕ್ಕದಲ್ಲಿದ್ದ ನಮಗೆ ಓದಲು ಪತ್ರಿಕೆಯನ್ನು ಕೇಳಿದಳು. ಅವಕಾಶವಾದಿಗಳಾದ ನಾವೂ ಅವಳ ಕೈಲಿದ್ದ ಮ್ಯಾಗ್ ಝೀನ್ ನ್ನು ಕೇಳಿ ಪಡೆದೆವು.
ನಂತರ ನಮ್ಮ ನಡುವೆ ಹಾಸ್ಯ ಚಟಾಕಿಗಳು, ಮೆಲುವಾತುಗಳು, ಸಂಭಾಷಣೆಗಳು, ಆ ಒಂದು ಸನ್ನೀವೇಶಕ್ಕೆ ಮೆರಗು ತಂದವೆನ್ನಿ. ಆ ಒಂದು ಗದ್ದಲದಲ್ಲಿ ಒಬ್ಬ ಅಜ್ಜಿಯೊಂದಿಗೆ ನಡೆದ ಹುಸಿಜಗಳ ಆ ಹುಡುಗಿಯನ್ನು ನಮ್ಮತ್ತ ಸೆಳೆಯುವಣತೆ ಮಾಡಿದ್ದುವು.ನಮ್ಮ ದುರ್ದೈವಕ್ಕೆ ಆಗ ಬಸ್ು ಪಂಕ್ಚರ್ ಆಯಿತು. ಬೇರೋಮದು ಬಸ್ ಬಂತಾದರೂ ಅಲ್ಲಿ ನಮ್ಮೆಲ್ಲರಿಗೆ ಕೂಡ್ರುವಷ್ಟು ಜಾಗವಿರಲಿಲ್ಲ. So, ನಮ್ಮ ಪ್ರಯಾಣ ನಿಂತೇ ಸಾಗಿತು.ನಮಗೂ ಅವಲ ಬಗ್ಗೆ ಹೆಚ್ಚು ತಿಳಿಯುವ ಾಸಕ್ತಿ ಹೆಚ್ಚಾಗುತ್ತ ಹೋಯಿತು. ಅವಳಿಗೂ ಅಷ್ಟೇ.ಆಗ ಻ವಳೇ ಮುಂದಾಗಿ ತನ್ನ ಪರಿಚಯ ಮಾಡಿಕೊಂಡಳು. ತನ್ನ ಹೆಸರು ರಮ್ಯ ಎಂದೂ ತಾನು ಕರ್ನಾಟಕ ಸಂಗೀತದಲ್ಲಿ ಅಭ್ಯಾಸ ಮಾಡುತ್ತಿರುವುದಾಗಿ ತಿಳಿಸಿದಳು. ಆಗ ತಾನೆ ಪಿಯುಸಿ ಮುಗಿಸಿ ಫಲಿತಾಂಸಕ್ಕಾಗಿ ಕಾಯುತ್ತಿರುವಳೆಂದೂ ತಿಳಿಯಿತು.
ಸಂಭಾಷಣೆಯ ಮದ್ಯೆ ಉಂಟಾದ ಬಾಯಾರಿಕೆ ನ್ಮಮ ಬಾಂಧವ್ಯವನ್ನು ಗಟ್ಟಿಗೊಳಿಸಿತು. ನೀರು ಕೊಟ್ಟಿದ್ದಕ್ಕೆ ಅವಳು ನಮ್ಮಿಂದ ಕೃತಜ್ಞತೆಗಳನ್ನೂ ಸಹ ಪಡೆಯದ ಅವಳು ಸ್ನೆಹದ ನಡುವೆ formalities ಯಾಕೆ ಅಮತಂದು ನಮ್ಮ ಸ್ನೇಹಕ್ಕೆ ನಿಜವಾದ ರಂಗು ತಂದಳು.
ಆದರೆ ತುಸು ಹೊತ್ತಿನ ನಂತರ ಅವಳಿಂದ ನಾವೆಲ್ಲ ದೂರವಾಗುವ ಸಮಯ ಬಂದೊದಗಿತು. ಮತ್ತೊಮ್ಮೆ ಬಸ್ ಕೈ ಕೊಟ್ಟಿತು. ನಾನೆಲ್ಲ ಮತ್ತೆ ಬಸ್ಸಿಂದ ಕೆಳಗೆ ಇಳಿದೆವು. ಆದರೆ ನಮ್ಮ ದುರದೃಷ್ಟಕ್ಕೆ ನಾವು ಬೇರೆ ಬಸ್ಸು ಹಿಡಿದು ಹೋಗಬೇಕಾಯಿತು.
(ಮುಂದುವರೆಯುವುದು….)
—-ಬಸವಣ್ಣೆಪ್ಪ ಎಸ್. ಗುಂಜಾಳ

ಆಶಯ

ಬಾಳ ನೊಗವನು ಹೊತ್ತು

ಜೀವಗಳೊಂದಾಗಿ ಹೋಹುದಕೆ

ವಿಧಿ ಮೇಳೈಸಿಕೊಂಬುತ ಬರುತಿಹದು ಬೆನ್ನ ಹಿಂದೆ

ಸುಖ ದುಃಖದ ಛಡಿಯೇಟುಗಳ ನೀಡಿ

 

 ನೊಗಭಾರ ಮಣಭಾರ ಎಂದುಲಿದು

ನಿಲ್ಲಿಸದೇ ಹೊತ್ತು ನಡೆಯಬೇಕಿದೆ

ಒಡೆಯ ಹೇಳಿದುದಕೆಲ್ಲ ಕೈ ಮುಗಿದು

ಬದುಕು ಬೇಲಿಯ ಸುತ್ತ ಸುತ್ತಬೇಕಿದೆ

 

ನಾಯಕನ ನೇವರಿಕೆಗೆ ಎಂಥಹದು ಪುಳಕ

ಧರ್ಮ ನೀತಿಗಳ ಕಡಿವಾಣದೊಳಗಿದ್ದು

ಕಾಯಕ ಬೆವರಿನಿಂದಲೆ ಈ ಮೈ ಗೆ ಜಳಕ

ಕರ್ಮ ಕೃತಿಗಳ ಹರಿವಾನದೊಳಗಿಂದು

 

ಬದುಕ ತುಂಬೆಲ್ಲ ಇನ್ನೆಂದು ಬರಿ ಉಳುಮೆ

  ಮಣ್ಣ ಕಣ ಕಣಗಳಿಂದ ಸುಖದ ಬೆಳೆ ತರಲು

ಬದುಕ ತುಂಬಲಿ ಎಂದೆಂದೂ ಸಿರಿ ಒಲುಮೆ

ಭಿನ್ನ ಮನಮನಗಳಿಂದ ಒಲವ ಮಳೆ ತರಲು

  

      —-ಸಚಿನ್ ಕುಮಾರ ಬಿ.ಹಿರೇಮಠ

ಬಿಸಿಲ ಬಾಲೆ

ಅದೊಂದು ಸುಂದರ ಮಧ್ಯಾಹ್ನ. ನಾವು ತಲುಪಬೇಕಾದ ೂರು 100 ಕಿ.ಮೀ ಆಚೆ ಇತ್ತು. ಬೆಂಬಿಡದ ದಗೆಯಲ್ಲಿ ಮೈ ಕರಗಿ ಹೋಗುತ್ತಿತ್ತು. ಬಸ್ಸಿನಲ್ಲಿ ಅಲುಗಾಡಲನುವಾಗದಷ್ಟು ರಶ್ಶು. ಆ ನೂಕು ನುಗ್ಗಲಿನೊಮದಿಗೆ ಬಸ್ಸು ಚಲಿಸತೊಡಗಿತ್ತು. ಮಗ್ಗಲಿನ ೊಂದು ಸೀಟು ಖಾಲಿ ಆಗುತ್ತಿದ್ದಂತೆಯೇ ಹೊರಗಿನಿಂದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಕರ್ಚಿಫನ್ನು ಕಿಟಕಿಯಿಂದ  ಎಸೆದು ತಮ್ಮ ಮಗಳಿಗೆ ಸೀಟು ಕಾದಿರಿಸಿದರು. ನಮ್ಮಲ್ಲಿ ಬಸ್ಸುಗಳಲ್ಲಿ, ರೈಲುಗಳಲ್ಲಿ, ಸೀಟು ಕಾಯ್ದಿರಿಸುವ ರಿತಿ ಇದು. ಆ ಸೀಟು ಯಾರದ್ದೋ ಎಂದು ನಾವು ನಿರೀಕ್ಷಿಸುತ್ತಿರುವಾಗ ಇಪ್ಪತ್ತರ ಸನಿಹದ ಬಾಲೆಯೊಬ್ಬಳು ಾ ಸೀಟಿಗೆ ಬಂದು ಕುಳಿತಳು. ಅಪ್ರತಿಮ ಸುಂದರಿ ಅಲ್ಲದ್ದಿದ್ದರೂ ಮಾಸದ ಚೆಲುವು.

                                     ತುಸು ಕಿಲೋ ಮೀಟರುಗಳನ್ನು ನುಂಗಿ ಬಸ್ಸು ಚಲಿಸುತ್ತಿರುವಾಗ ಾಕೆ ಮ್ಯಾಗಝೀನ್ ನ್ನು ಬಿಡಿಸಿ ಓದತೊಡಗಿದಳು. ನಾವು ಮೂರು ಜನ ಗೆಳೆಯರು, ಸಹಜವಾಗಿ ನಮ್ಮ ದೃಷ್ಟಿ ಅವಳತ್ತ ಹರಿಯಿತು. ಪದೇ ಪದೆ ಅವಳನ್ನೇ ನೋಡುವಷ್ಟು ಚೆಂದವಾಗಿದ್ದಳು ಆಕೆ. ಮನಸ್ಸೊಂದು ಮರ್ಕಟ. ಅ ಕ್ಷಣಗಳಲ್ಲೆಲ್ಲ ನಮ್ಮ ನಮ್ಮಲ್ಲಿ ಸರಿದಾಡಿದ ಭಾವನೆಗಳು, ಆಲೋಚನೆಗಳು ನಿಜಕ್ಕೂ ಹೇಲತೀರದಂತಹವು. ಒಮ್ಮೆ ನಂದಾ ದೀಪದಂತೆ ತೋರುತ್ತಾಳೆ, ಇನ್ನೊಮ್ಮೆ ಮಗುವಂತೆ ತೋರುತ್ತಾಳೆ. ಒಮ್ಮೆ ಹೃದಯ ಕದಿಯುವಂತೆ ಭಾಸವಾಗುತ್ತಾಳೆ. ಮಗದೊಮ್ಮೆ ಮೇಣದ ಬೊಂಬೆಯಂತೆ ತೋರುತ್ತಾಳೆ. ಏತನ್ಮಧ್ಯೆ ನಾವು ಓದುತ್ತಿದ್ದ ಪತ್ರಿಕೆಯೊಂದನ್ನು ಅವಳು ಎರವಲು ಕೇಳಿದಳು. ಪ್ರತಿಯಾಗಿ  ನಾವು ಅವಳು ಓದುತ್ತಿದ್ದ ಮ್ಯಾಗಝೀನ ಕೇಳಿದೆವು. ಆದರೆ ಓದಲು ಪ್ರಯತ್ನಿಸಿದ್ದು ಮಾತ್ರ ಅವಳ ಅಂತರಂಗ.

                                      ಪ್ರಯಾಣಿಕರ ದುರಾದೃಷ್ಟಕ್ಕೆ ಬಸ್ಸು ಮುನಿಸಿಕೊಂಡು ನಿಂತಿತು. ಎಲ್ಲರೂ ಬೇರೆ ಬೇರೆ ಬಸ್ಸಿಗೆ ಹೊರಡಲು ಕೆಳಗಿಳಿಯಬೇಕಾಯಿತು. ನಮ್ಮ ಅದೃಷ್ಟಕ್ಕೆ ಒಂದು ಎದುರಾಯಿತಾದರೂ ಸೀಟಿರಲಿಲ್ಲ. ನಾವೆಲ್ಲ ನಿಂತೇ ಪ್ರಯಾಣಿಸಬೇಕಾಯಿತು. ನಮ್ಮ ಪಕ್ಕದಲ್ಲಿ ಅವ:ಳು ನಿಮತಳು. ಅಲ್ಲಿ ಶುರುವಾಯಿತು ಮಾತಿನ ವರಸೆ. ಆ ವರಸೆಗೆ ನನ್ನ ಗೆಳೆಯನೊಬ್ಬ ಧೈರ್ಯಮಾಡಿ ನೀರು ಕೊಡ್ತೀರಾ ಅಂತ ಕೇಳ್ದ. ಅವಳು ಇಲ್ಲವೆನ್ನದೆ ನೀರು ಕೊಟ್ಟಳು. ನಮಗೆ ಕಿಂದರಿ ಜೋಗಿಯ ಚಿತ್ರದ ‘ಗಂಗೆ ಬಾರೆ…. ತುಂಗೆ ಬಾರೆ…’ ಹಾಡು ನೆನಪಾಯಿತು. ನಮ್ಮ ಗೆಳೆಯನ ಥ್ಯಾಂಕ್ಸಿಗೆ ಅವಳು ಮುನಿಸಿಕೊಂಡು “ಥ್ಯಾಂಕ್ಸ್  ಹೇಳ್ಬೇಡಿ. ನೀರು ಜೀವ ಜಲ. ನೀ ರು ಕೊಟ್ಟಿದ್ದಕ್ಕೆ ಪ್ರತಿಯಾಗಿ ನಾನು ಥ್ಯಾಂಕ್ಸ್ ಪಡೆದರೆ ಮುಂದಿನ ಜನ್ಮದಲ್ಲಿ ಹಲ್ಲಿಯಾಗಿ ಹುಟ್ಟಬೇಕಾಗುತ್ತೆ. ನಿಮ್ಮ ಥ್ಯಾಂಕ್ಸನ್ನು ವಾಪಸ್ ತಕ್ಕೊಳ್ಳಿ “ಎಂದಳು. ನಾವು ಆ ವರಸೆಗೆ ಬೆರಗಾಗಿ ನಮ್ಮ ಥ್ಯಾಂಕ್ಸ್ ವಾಪಸ್ ಪಡೆದೆವು. ಬಳಿಕ ನಮ್ಮ ಪರಿಚಯ ಶುರುವಾಯಿತು. ಮೊದಲು ಆಕೆಯೇ ತನ್ನ ಪರಿಚಯ ಮಾಡಿಕೊಂಡಳು. ಅವಳ ಹೆಸರು ‘ರಮ್ಯ. ಬಿ’ ಎಂದು. ಗಂಗಾವತಿಯವಳು. ಹಿಂದೂಸ್ತಾನಿ ಸಂಗೀತಾಭ್ಯಾಸದಲ್ಲಿ ಪರಿಣಿತಳು. ಪಿಯುಸಿ ಮುಗಿಸಿದ್ದಳು. ಒಳ್ಲೆಯ ಮನೆತನ. ಗಂಗಾವತಿಯಲ್ಲಿ ಅನೇಕ ಸಂಗೀತ ಕಚೇರಿಗಳನ್ನು ನೀಡಿದ ಖ್ಯಾತಿ ಅವಳದು. ಅವಳ ಮಾತುಗಳು ಅಷ್ಟೆ ಮಧುರವಾಗಿದ್ದವು, ಇನ್ನು ಅವಳು ಹಾಡಿದಳೆಂದರೆ ಗಾನಲೋಕ ಸೃಷ್ಟಿಯಾಗುವುದರಲ್ಲಿ ಸಂದೆಹವೆ ಇಲ್ಲ. ನಾವು ನಮ್ಮ ಪರಿಚಯ ಮಾಡಿಕೊಂಡೆವು. ನಮ್ಮ ಶಿಕ್ಷಕ ವೃತ್ತಿ, ನಮ್ಮ ಕರ್ಮಭೂಮಿ. ನಮ್ಮ ಜನ್ಮಭೂಮಿ ಇವೆಲ್ಲವನ್ನು ಹೇಳಿಕೊಂಡೆವು. ನಮ್ಮಲ್ಲಿನ ಭಯ, ವಿಹಲ್ವತೆ ಎಲ್ಲವೂ ಮಾಯವಾಗಿ ಒಂದು ಸುಂದರ ಸ್ನೇಹ ನಮಗೆ ತಿಳಿಯದಂತೆ ಬೆಸೆದುಕೊಂಡುಬಿಟ್ಟಿತು. ಆ ಆಯಾಸವೆಲ್ಲ  ಾಕೆಯೊಂದಿಗಿನ ಸಂಭಾಷಣೆಯಲ್ಲಿ ಕರಗಿ ಹೋದಂತಾಯಿತು. ನಮ್ಮ ದುರಾದೃಷ್ಟಕ್ಕೆ ಆ ಬಸ್ಸು ಮತ್ತೇ ಕೈ ಕೊಟ್ಟಿತು.

       ನಮಗೆ ಸಮಯವಿರಲಿಲ್ಲವಾದದುದರಿಂದ ನಾವು ಅವಳಿಗಾಗಿ ಕಾಯದೇ ಸಿಂಧನೂರಿಗೆ ಹಹೋಗುವ ಬಸ್ಸನ್ನೇರಿ ಸಿಂಧನೂರಿಗೆ ಬಂದೆವು. ಅವಳು ‘ಬೇಡ’ವೆಂದರೂ ಕೇಳದೆ.. ಸಿಂಧನೂರಿಗೆ ಬಂದಾಕ್ಷಣ ಅವಳನ್ನು ಮತ್ತೇ ನೋಡಲೇ ಬೇಕೆಂದು ಅನ್ನಿಸತೊಡಗಿತು. ಅವಳಿಗಾಗಿ ಬಸ್ ಸ್ಟ್ಯಾಂಡಿನಲ್ಲಿ ಹತ್ತು ಹದಿನಾರತು ನಿಮಿಷ ಕಾದೆವಾದೆರೂ ಅವಳ ಸುಳಿವೇ ಸಿಗಲಿಲ್ಲ. ನಾವು ಉಪಾಹಾರ ಮುಗಿಸಿ ಕೊನೆಯ ಪ್ರಯತ್ನವೆಂಬಂತೆ ಅಲ್ಲಿರುವ ಬಸ್ಉಗಳನ್ನೆಲ್ಲಾ ತಡಕಾಡುವಾಗ ಸಿಕ್ಕಳು.ಅದೆ ನಗು, ಅದೆ ಸೌಂದರ್ಯ,ಅದೇ  ಹವಣಿಕೆ ಕಂಡಿತು.. ಒಂದು ಸುಂದರ ನಗುವಿನೊಂದಿಗೆ ಅವಳನ್ನು ಬೀಳ್ಕೊಟ್ಟೆವು.        

                                          —ಸಚಿನ್ ಕುಮಾರ ಬಿ.ಹಿರೇಮಠ